ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Tuesday, February 28, 2012
Friday, February 24, 2012
ಅಲೆಮನೆ
ಸವಿದರೆ ಬಿಸಿ ಬಿಸಿ ಬೆಲ್ಲ
ನಲ್ಲೆಯ ಗಲ್ಲದಷ್ಟೇ ಸಿಹಿ ಎಲ್ಲಾ .!!!!
ಮೂವತ್ತು ವರ್ಷಗಳ ಹಿಂದೆ ಹಿಂತಿರುಗಿ ನೋಡಿದಾಗ...........
ಗೌರಿಬಿದನೂರ್ ನ ಆಲೆಮನೆ ಯಾ ವ್ಯೆಭವ ಭಾರತ ದಲ್ಲೇ ಪ್ರಸಿದ್ದಿ. ಇಲ್ಲಿನ ನೇಗಿಲ ಯೋಗಿಗಳು
ಕಬ್ಬಿನ ಬೆಳೆಯನ್ನು ಭಾರತದಲ್ಲೇ ಅತಿ ಹೆಚ್ಚಾಗಿ ಬೆಳೆಯುತ್ತಿದ್ದರು ಮತ್ತು ಒಂದು ಎಕರೆಗೆ ಸಾವಯವ ಗೊಬ್ಬರ ಬಳಸಿ ಹೆಚ್ಚು ಇಳವರಿ ತೆಗಯುತ್ತಿದ್ದರು. ಅನೇಕ ಕೃಷಿ ಪ್ರಶಶ್ತಿ ಹೊಡುಕಿಕೊಂಡು ಬರುತ್ತಿತ್ತು.,ಈ ತಾಲೂಕಿನ " ನಾಮಗೊಂಡ್ಲು " ಕಬ್ಬಿನ ಜಲ್ಲೆಯಂತು ಅಮೃತ ದಷ್ಟು ರುಚಿ ಕಾರಣ ಈ ಮಣ್ಣಿನ ಗುಣ ವಿಶೇಷ ವಾದದು. ಈ ಹಳ್ಳಿಯ ಸುತ್ತಾ ಹತ್ತು ಕಿ.ಮಿ. ತಯಾರಿಸಿದ ಬೆಲ್ಲ ವಂತೂ ಇತರೆ ಯಾವ ಬೆಲ್ಲಕ್ಕು ಸರಿಸಾಟಿ ಬರುವುದಿಲ್ಲ.ಅದಕ್ಕೆ ಈ ಸಮಯದಲ್ಲೂ ನಾಮಗೊಂಡ್ಲು ಬೆಲ್ಲ ಅಂದ್ರೆ ಮುಗಿಬಿದ್ದು ಕೊಳ್ಳುತ್ತಾರೆ. ಆಗಾ ತಾಲೂಕಿನಲ್ಲಿ ಸಾವಿರಾರು ಅಲೆಮನೆಗಳು ಈಗ ದುರ್ಬಿನು ಹಾಕಿ ಹುಡುಕಿದರೂ ಕಾಣುವುದು ಕಷ್ಟ. ಈ ಛಾಯಾ ಚಿತ್ರ ನಾಮಗೊಂಡ್ಲು ಪಕ್ಕದ ಹಳ್ಳಿಯ "ಬಾಲರೆಡ್ಡಿ ಹಳ್ಳಿ ".
ಮೊಟ್ಟ ಮೊದಲ ಬಾರಿಗೆ ಕಬ್ಬನ್ನು ಗಾಣಕ್ಕೆ ಇಟ್ಟು..ಕಬ್ಬಿನ ಹಾಲನ್ನು ಬಕೇಟು ಮೂಲಕ ಹೂತ್ತು , ಎರಡನೇ ಛಾಯಾಚಿತ್ರ ದಲ್ಲಿ ತೋರಿಸಿದಂತೆ ದೊಡ್ಡ ಕೊಪ್ಪರಿಕೆಗೆ ಸುರಿದು ಚನ್ನಾಗಿ ಕಾಯಸಿ ಹದಕ್ಕೆ ಬಂದ ಮೇಲೆ , ಕೆಳೆಗಿನ ಕೊಪ್ಪಕರಿಗೆ ಸುರಿದು ........ನಂತರ ಚೌಕಾರದ ಗುಣಿಗೆ ಸುರಿದು (ಮೂರನೆ ಚಿತ್ರ ನೋಡಿ)ಚನ್ನಾಗಿ ಕಲಕಿ .........ನಂತರ ಬಿಸಿ ಆರಿದ ಮೇಲೆ
ಸಣ್ಣ ಉಂಡೆ ಮಾಡಿದರೆ ಅಪ್ಪಟ ಬೆಲ್ಲ ಸಿದ್ದ.
Tuesday, February 21, 2012
Tuesday, January 31, 2012
Thursday, January 26, 2012
Tuesday, January 17, 2012
ಹಚ್ಚೆ
ಹಚ್ಚೆ. ಇದಕ್ಕೆ ಶತ ಶತಮಾನಗಳ ಇತಿಹಾಸವಿದೆ.ಸಂಪ್ರದಾಯವಾಗಿ ಹಚ್ಚೆಗೆ ಗಿಡಮೂಲಿಕೆಗಳನ್ನು ಚೆನ್ನಾಗಿ ಅರೆದು ಅದರಿಂದ ರಸವನ್ನು ಸಂಗ್ರಹಿಸಿ,ತಮಗೆ ಬೇಕಾದ ಚಿತ್ರವನ್ನು ಮುದ್ರಿಸಿ, ನಂತರ ಗಿಡಮೊಲಿಕೆಯ ರಸವನ್ನು ಸೂಜಿ ಇಂದ ನೆನೆಸಿಕೊಂಡು ಚುಚ್ಚುತ್ತ.........ಚಿತ್ರವನ್ನು ಮುಗಿಸುತ್ತಾರೆ.ಈ ರೀತಿ ಚಿತ್ರಿಸಿದ ಹಚ್ಚೆ ಮಾನವನ ಉಸಿರಿನ ತನಕ ಜೊತೆಯಲ್ಲಿ ಇರುತ್ತದೆ. ಈ ಹಚ್ಚೆಯನ್ನು ಸ್ನೇಹ,ಪ್ರೀತಿ,ಪ್ರೇಮ...ನೆನಪಿಗೆ ಚಿತ್ರಿಸಿ ಕೊಳ್ಳುತ್ತಾರೆ. ಈಗ ಅಧುನಿಕ ಕಾಲದ ಹಚ್ಚೆಗಳುಹಾಕಿದ ಸಾಮಾನ್ಯವಾಗಿ ಒಂದು ತಿಂಗಳು ಇರುವುದಿಲ್ಲ ಅನ್ನಿಸುತ್ತೆ. ಈ ಅಧುನಿಕ ಹಚ್ಚೆಗಳಲ್ಲಿ ಆಲಂಕಾರ ಪ್ರಧಾನವಾಗಿ ಎದ್ದು ಕಾಣುತ್ತಿರುತ್ತದೆ. ಮಾನವ ಸಂಭದದ ಭಾವನೆಗಳು ಕಡಿಮೆ.
Thursday, January 12, 2012
ಜಾತ್ರೆಯಲಿ.. ಯಾತ್ರೆ
ಗೌರಿಬಿದನೂರ್ ನಿಂದ ಕೇವಲ ೫ ಕಿ.ಮಿ. ದೂರದಲ್ಲಿರುವ " ಅಲಕಾಪುರ " ಹಳ್ಳಿಯಲ್ಲಿ ಸೋಮುವಾರ ಹುಣ್ಣಿಮೆ ದಿನ ಸೋಮೇಶ್ವರ ಸ್ವಾಮಿ ಯಾ ಜಾತ್ರೆ ನಡೆಯಿತು. ನನ್ನ ಕ್ಯಾಮರ ದೊಂದಿಗೆ ಆ ಜಾತ್ರೆ ಒಳ ಹೊಕ್ಕಾಗ ನನ್ನ ಕಣ್ಣಿಗೆ ಈ ದೃಶ್ಯ ಕಂಡಿತು. ತೇರು, ಸುರುಳಿಯಾಕಾರದ ದಬ್ಬೆ (ರಿಂಗ್) ಯನ್ನು ವಸ್ತು ಮೇಲೆ ಹಾಕುವ ಆಟ,ಗಿಳಿ ಶಾಸ್ತ್ರ,ಪಿಳ್ಳಂಗೋವಿ,ಚಾಲಕಿ ಹೂ ಮಾರುವ ಹುಡುಗ,ಉತ್ಸವ ಮೂರ್ತಿ ತರುವ,ಹುಡುಗರನ್ನು ತುಸು ಹಾಳು ಮಾಡುವ ಅಂಕಿ ಆಟ,ಜಿಲೇಬಿ,ಜಾನಪದ ಕುಣಿತಗಳು,ಮಕ್ಕಳ ಆಟಗಳು.................... ಹೀಗೆ ಹಲವಾರು ಒಂದುಂದು ಛಾಯಾ ಚಿತ್ರದ ಹಿಂದೆ
ಒಂದುಂದು ಕತೆಯೇ ಇದೆ ಎನ್ನಬಹುದು. ನಮ್ಮ ಹಳ್ಳಿಯ ಸಂಸ್ಕೃತಿಯನ್ನು ನೋಡಲು ಇಂತಹ ಜಾತ್ರೆ, ಸಂತೆ,ಕರಗ.....ನೋಡಿದಾಗಲೇ ಅರಿವು ಆಗುವುದು.
ಜಾತ್ರೆಯಲಿ ...ಯಾತ್ರೆ ೨
ಗೌರಿಬಿದನೂರ್ ನಿಂದ ಕೇವಲ ೫ ಕಿ.ಮಿ. ದೂರದಲ್ಲಿರುವ " ಅಲಕಾಪುರ " ಹಳ್ಳಿಯಲ್ಲಿ ಸೋಮುವಾರ ಹುಣ್ಣಿಮೆ ದಿನ ಸೋಮೇಶ್ವರ ಸ್ವಾಮಿ ಯಾ ಜಾತ್ರೆ ನಡೆಯಿತು. ನನ್ನ ಕ್ಯಾಮರ ದೊಂದಿಗೆ ಆ ಜಾತ್ರೆ ಒಳ ಹೊಕ್ಕಾಗ ನನ್ನ ಕಣ್ಣಿಗೆ ಈ ದೃಶ್ಯ ಕಂಡಿತು. ತೇರು, ಸುರುಳಿಯಾಕಾರದ ದಬ್ಬೆ (ರಿಂಗ್) ಯನ್ನು ವಸ್ತು ಮೇಲೆ ಹಾಕುವ ಆಟ,ಗಿಳಿ ಶಾಸ್ತ್ರ,ಪಿಳ್ಳಂಗೋವಿ,ಚಾಲಕಿ ಹೂ ಮಾರುವ ಹುಡುಗ,ಉತ್ಸವ ಮೂರ್ತಿ ತರುವ,ಹುಡುಗರನ್ನು ತುಸು ಹಾಳು ಮಾಡುವ ಅಂಕಿ ಆಟ,ಜಿಲೇಬಿ,ಜಾನಪದ ಕುಣಿತಗಳು,ಮಕ್ಕಳ ಆಟಗಳು.................... ಹೀಗೆ ಹಲವಾರು ಒಂದುಂದು ಛಾಯಾ ಚಿತ್ರದ ಹಿಂದೆ
ಒಂದುಂದು ಕತೆಯೇ ಇದೆ ಎನ್ನಬಹುದು. ನಮ್ಮ ಹಳ್ಳಿಯ ಸಂಸ್ಕೃತಿಯನ್ನು ನೋಡಲು ಇಂತಹ ಜಾತ್ರೆ, ಸಂತೆ,ಕರಗ.....ನೋಡಿದಾಗಲೇ ಅರಿವು ಆಗುವುದು.
Wednesday, January 11, 2012
ಗೌರಿಬಿದನೂರ್ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ
ಸಾಹಿತ್ಯದ ಆಸಕ್ತರು
- ನನ್ನ" ಒಬ್ಬಟ್ಟು" ಮಕ್ಕಳ ಕವನ ಹೇಳುತ್ತಿರುವುದು
ಸಮ್ಮೇಳನ ಛಾಯಾಚಿತ್ರಗಳನ್ನು ಚಿತ್ರಿಸಲು ನೂಕು ನುಗ್ಗಲು
**********************
ಗೌರಿಬಿದನೂರ್ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ೭ ಮತ್ತು ೮ ರಂದು ಅದ್ಬುರಿಯಾಗಿ ನಡೆಯಿತು.ಸಮ್ಮೇಳನ ಅಧ್ಯಕ್ಷರಾಗಿ ಕೆ.ನಾರಾಯಣಸ್ವಾಮಿ ರವರು ನೆಡಿಸಿಕೊಟ್ಟರು. ಸಂಜೆ ಕವಿಗೋಷ್ಠಿ ಬಹಳ ಸುಂದರವಾಗಿ ನಡೆಯಿತು. ಅದರಲ್ಲಿ ನಾನು ಈ ಮಕ್ಕಳ ಕವನ ಓದಿದೆ. ಸಮ್ಮೇಳನ ನೆನಪಿಗಾಗಿ " ಗೌರಿ ಭಾಗಿನ " ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ಒಬ್ಬಟ್ಟು
ಒಬ್ಬಟ್ಟು ಒಬ್ಬಟ್ಟು
ಹಬ್ಬಕೆ ತಟ್ಟಿದ ಒಬ್ಬಟ್ಟು
ಬೆಲ್ಲದ ಸಿಹಿಯ ಒಬ್ಬಟ್ಟು
ಪಾತ್ರೆ ತುಂಬಿತು ಒಬ್ಬಟ್ಟು
ಘಮ ಘಮ ವಾಸನೆ ಹರಡಿತ್ತು
ನೆಂಟರು ಬಂದರು ಸಾಕಷ್ಟು
ಬಂದರು ನೆಂಟರು ಮಳೆಯಸ್ಟು
ಊಟಕೆ ಕುಳಿತರು ಮತ್ತಷ್ಟು
ತಿಂದರು ಎಂಟೆಂಟು ಹತ್ತತ್ತು
ಹೊಟ್ಟೆಗೆ ತುರುಕಿದರು ಇನ್ನಸ್ಟು
ಹಬ್ಬದ ಒಬ್ಬಟ್ಟು ಮುಗಿದೊಯ್ತು
ತಿನ್ನುವ ಆಸೆಯು ಬತ್ತೋಯ್ತು
ಹೊಟ್ಟೆ ತುಂಬಾ ಹಸಿದಿತ್ತು
ಸಿಕೂ ಬಾಕು ಉಳಿದಿತ್ತು
ಬೇಳೆ ಸಾರು ಸುರಿದಾಯ್ತು
ಹೊಟ್ಟೆ ತುಂಬಾ ಕುಡಿದಾಯ್ತು
ಹಬ್ಬದ ಒಬ್ಬಟ್ಟು ಕನಸಾಯ್ತು
Tuesday, January 3, 2012
ವಿದುರಾಶ್ವತ್ಥ
ದೇವಸ್ಥಾನದ ವಿಹಂಗಮ ನೋಟ
ಭಕ್ತಿ-ಭಾವಗಳು ಭಗವಂತನಿಗೆ ಸಮರ್ಪಣೆ
ಸರ್ವ ಅಲಂಕೃತ ಗೊಂಡ ನಾಗರ ವಿಗ್ರಹ
ಸ್ವತಂತ್ರ ಸಂಗ್ರಾಮದಲ್ಲಿ ಹೋರಟ ಮಾಡಿದ ಮಹನೀಯರರಿಗೆ ವೀರ ಸೌಧ
ಹೋರಾಟದಲ್ಲಿ ಮಾಡಿದವರ ನೆನಪಿಗೆ ವೀರಭೂಮಿ
ಭಗತ ಸಿಂಘರ ಪ್ರತಿಮೆ
*********************
ವಿದುರಾಶ್ವತ್ಥ ಭಾರತದಲ್ಲೇ ಪುರಾಣ ಪ್ರಸಿದ್ದವಾದ ಕ್ಷೇತ್ರ. ಮಹಾಭಾರತದ " ವಿದುರ " ನೆಟ್ಟ ಅಶ್ವಥ್ ವೃಕ್ಷ ಇದೆ.ನಾಗ ದೋಷ ದ ಪರಿಹಾರಕ್ಕೆ........ನಾಗರ ವಿಗ್ರಹವನ್ನು ಪ್ರತಿಷ್ಠೆ ಮಾಡುತ್ತಾರೆ.ಮತ್ತು ಸ್ವತಂತ್ರ ಹೋರಾಟದಲ್ಲಿ ಹಳ್ಳಿಯ ಜನತೆ ಭಾಗಿಯಾಗಿ...ಬ್ರಿಟಿಷರ ಬಂದೊಕಿಗೆ ಎದೆ ಒಡ್ಡಿದ್ದಾರೆ. ಈ ಸನ್ನಿವೇಶ ಎರಡೆನೇ ಜಲಿಯನ್ ವಾಲಬಗ್ಎಂದು ಹೆಸರಾಗಿದೆ. ಈಗ ಸರಕಾರದ ಕೃಪಾ ದೃಷ್ಟಿ ಇಂದ ನವ ನಿರ್ಮಾಣ ವಾಗಿ ವೀರಸೌಧ,ವೀರಭೂಮಿ,ನಾಟಕ ಮಂಟಪ,ಸ್ವತಂತ್ರ ಹೋರಾಟಗಾರರ ಪುತ್ಥಳಿಗಳು,ಹಸಿರು ವನ........ಪ್ರವಾಸಿಗರಿಗೆ ಸಕಲ ಅನುಕೊಲಗಳು ಮಾಡಿವೆ.ಬೆಂಗಳೊರು ಇಂದ ನೇರವಾಗಿ ವಿದುರಾಶ್ವತ್ಥ ಕ್ಕೆ ಬಸ್ಸಿನ ಅನುಕೂಲ ಇದೆ. ತಾವುಗಳು ಒಮ್ಮೆ ಈ ಕ್ಷೇತ್ರಕ್ಕೆ ಕೊಡಿ.
Monday, January 2, 2012
ಉಪನಯನ
ಯಗ್ನೋಪವಿತ ಧಾರಣೆ
ಆಚಮನ
ತಾಯಿಯ ಸಂಗಡ ಒಂದೇ ಎಲೆಯ ಅಂತಿಮ ಭೋಜನ
********************
ಮಾನವನನ್ನು ಹಸನು ಗೊಳಿಸಲು ಇಹ ಮತ್ತು ಪರ ಲೋಕದಲ್ಲಿ
ಅವನು ಸುಖ ಶಾಂತಿಗಳನ್ನೂ ಪಡೆಯುವಂತೆ ಮಾಡುವ ಸಂಸ್ಕಾರಗಳು
ಹದಿನಾರು. ಅದರಲ್ಲಿ ಉಪನಯನ ಒಂದು.
ಇದರ ಬಗ್ಗೆ ಆಸಕ್ತಿ ಇದ್ದರೇ.........."ಉಪನಯನ " ಪುಸ್ತಕ ತೆಗದು
ನೋಡಬಹುದು.
ಈ ಉಪನಯನ ಜಾತಿಬೇದವಿಲ್ಲದೆ ಯಾರು ಬೇಕಾದರೂ...ಉಪನಯನ
ಮಾಡಿ ಕೊಳ್ಳಬಹುದು.
ಆಚಮನ
ತಾಯಿಯ ಸಂಗಡ ಒಂದೇ ಎಲೆಯ ಅಂತಿಮ ಭೋಜನ
********************
ಮಾನವನನ್ನು ಹಸನು ಗೊಳಿಸಲು ಇಹ ಮತ್ತು ಪರ ಲೋಕದಲ್ಲಿ
ಅವನು ಸುಖ ಶಾಂತಿಗಳನ್ನೂ ಪಡೆಯುವಂತೆ ಮಾಡುವ ಸಂಸ್ಕಾರಗಳು
ಹದಿನಾರು. ಅದರಲ್ಲಿ ಉಪನಯನ ಒಂದು.
ಇದರ ಬಗ್ಗೆ ಆಸಕ್ತಿ ಇದ್ದರೇ.........."ಉಪನಯನ " ಪುಸ್ತಕ ತೆಗದು
ನೋಡಬಹುದು.
ಈ ಉಪನಯನ ಜಾತಿಬೇದವಿಲ್ಲದೆ ಯಾರು ಬೇಕಾದರೂ...ಉಪನಯನ
ಮಾಡಿ ಕೊಳ್ಳಬಹುದು.
Friday, December 30, 2011
Monday, December 26, 2011
Subscribe to:
Posts (Atom)