Thursday, September 7, 2017

ಪಿತೃ ಪಕ್ಷ

    ಪಿತೃ ಪಕ್ಷ 
     ಹುಟ್ಟಿಗೆ ಅಂದ್ರೆ  ಹುಟ್ಟಿದ ಹಬ್ಬಕ್ಕೆ ಸಂತೋಷ,ಸಡಗರ,ಸಂಭ್ರಮ.... ಪ್ರಾಮುಖ್ಯತೆ ಹೆಚ್ಚು. ಏಕೆಂದ್ರೆ  ಹುಟ್ಟು  ಕಣ್ಣಿಗೆ  ಕಾಣುತ್ತೆ..!!!. 
     ಸಾವಿನ ನಂತರದ  ಲೋಕವನ್ನಾ  ಕಂಡಿರುವ  ಮಹಾಭಾವರು  ಬೆರಳೆಣಿಕೆ. 
     ಗತಿಸಿದ ಗುರು ಹಿರಿಯರಿಗೆ ಸ್ಮರಿಸುವುದಕ್ಕೆ ಸರ್ವ ಪಿತೃ ಮಹಾಲಯ(ಪಿತೃ)ಪಕ್ಷ  ಶ್ರೇಷ್ಠ ಮತ್ತು ಜೇಷ್ಠವಾಗಿದೆ. 
     ಪ್ರತಿವರ್ಷ ಶ್ರಾದ್ಧ ಅಥಾವ ಎಡೆ ಆಚರಿಸಿ ಹಿರಿಯರಿಗೆ ಗೌರವ ಸೂಚಿಸಿ ಋಣ ಸಂದಾಯ ಮಾಡುವುದು  ರಾಮಾಯಣ ಕಾಲದಿಂದ ಶ್ರೀ ರಾಮಚಂದ್ರ  ಪ್ರಭು ಯುಗದಿಂದ ಶ್ರಾದ್ದ ಆಚರಣೆಯಿದೆ. 
    ಪ್ರಥಮವಾಗಿ ಶಾದ್ಧಚರಣೆ ಸಾಗರದ ತೀರದಲ್ಲಿ ನೆರವೇರತ್ತಿತ್ತು. ನಂತರ  ಕಾಲ  ಸರಿಯುತ್ತಿದ್ದ ಹಾಗೆ 
ಜೀವನದಿಯ ದಡದಲ್ಲಿ,ಸಮೃದ್ಧಿವಾಗಿ ನೀರು ತುಂಬಿರುವ ಕೆರೆ,ನೀರು ತುಂಬಿರುವ  ಭಾವಿ,ವಾಸಿಸವ ಮನೆ..... 
ಈಗ ಮಠಗಳಲ್ಲಿ  ಆಚರಿಸುತ್ತಿದ್ದೇವೆ. ಸ್ಥಳ ಬದಲಾದರು  ಶ್ರದ್ಧೆ,ನಂಬಿಕೆ,ಆಚರಣೆ... ಬದಲಾಗಿಲಾಗಿದೆರುವುದು ವಿಶೇಷ. ಶ್ರಾದ್ಧ  ಬಗ್ಗೆ "ಗೀತೆ"ಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ  ಸೂಕ್ಶ್ಮವಾಗಿ ವಿವರಿಸಿದ್ದಾನೆ. 
     ಶ್ರಾದ್ಧ,ಎಡೆ,ತರ್ಪಣ,ಸ್ವಯಂಪಾಕ..... ಆಚರಿಸಲು ಮತ್ತು ಆಚರಿಸದಿರಲು   ಸಂಪೂರ್ಣ  ಹಕ್ಕು ಎಲ್ಲರಿಗೂ ಇದೆ. ಅದು  ಅವರ  ನಂಬಿಕೆಗೆ  ಸೇರಿದ್ದು.   
     ಇದರ ಬಗ್ಗೆ ತುಸು ತಿಳಿಯುವ  ಆಸಕ್ತಿ ಇದ್ದರೆ "ಅವಳು ಚೆಲುವೆ" ನನ್ನ ಕಥಾ ಸಂಕಲನ ಓದಬಹುದು. ನನ್ನೂರಿನ ಸರಕಾರಿ ಗ್ರಂಥಾಲಯದಲ್ಲಿ ಲಭ್ಯವಿದೆ.