Thursday, July 27, 2017

ಗೌರಿಬಿದನೂರು ಗೆ ನಾಮಾಕರಣವಾದುದು

ಗೌರಿಬಿದನೂರು ಗೆ ನಾಮಾಕರಣವಾದುದು
------------------------------------------
ನಮ್ಮ ಗೌರಿಬಿದನೂರು ಊರಿಗೆ ಮಹಾಭಾರತದ ಇತಿಹಾಸ ಬಳುವಳಿ ಇದೆ . ಗೌರಿಬಿದನೂರು ಹೆಸರು ಸಾಗಿ ಬಂದ ಹಾದಿ ಈ ರೀತಿ ಇದೆ .
ಮಹಾಭಾರತ ಯುದ್ಧ ಪೂರ್ಣಗೊಂಡ ನಂತರ ... ವಿದುರ ರರು ವ್ಯಾಸರ ಆಜ್ಞೆ ಯಂತೆ ಮೋಕ್ಷ ಹೊಂದಲು ಉತ್ತರಪಿನಾಕಿನಿ ನದಿದಡ ದಲ್ಲಿರುವ ಮ್ಯೇತ್ರಿಯಿ ಋಷಿಗಳ ಬಳಿ ಆಶ್ರಯ ಪಡೆದರು . ಅವರ ಆದೇಶ ಮೇರೆಗೆ ನಾರಾಯಣ ಮಂತ್ರ ಪಟಿಸುತ್ತ ಅಶ್ವತ್ಥ ವೃಕ್ಷ ನೆಟ್ಟು ಪುಜಿಸಿದರು . ನಂತರ ಅಶ್ವತ್ಥ ನಾರಾಯಣ ಸ್ವಾಮಿ ಕೃಪೆ ಇಂದ ಮೋಕ್ಷ ಪಡೆದರು. ಈ ಪವಿತ್ರ ಸ್ಥಳಕ್ಕೆ "ವಿದೂರೂರು"ಎಂದು ಹೆಸರು ಗಳಿಸಿ ಸಾವಿರಾರು ವರ್ಷ ಪ್ರಸಿದ್ದಿ ಪಡೆಯಿತು . ನಂತರ ಕಾಲಕ್ರಮೇಣ ವಿದೂರೂರು ಆಳ್ವಿಕೆಯಲ್ಲಿ ಒಳಪಟ್ಟಿದ್ದ ದಾರಿನಾಯನಕನ ಪಾಳ್ಯದ ಪಾಳೆಗಾರ ತನ್ನ ಕಿರಿ ಮಗಳಾದ ಗೌರಿ ಗೆ ವಿದೂರೂರು ನ್ನು ಬಳುವಳಿಯಾಗಿಕೊಟ್ಟ ನಂತರ.... ಗೌರಿ ವಿದೂರೂರು ನಂತರ " ಗೌರಿಬಿದನೂರು" ಹೆಸರಲ್ಲಿ ಪ್ರಸಿದ್ದಿ ಪಡೆಯಿತು .ನಮ್ಮ ಗೌರಿಬಿದನೂರು ಜನತೆ ಈ ಬರಹ ಇತರರಿಗೆ ತಿಳಿಸಿ ಮತ್ತು share ಮಾಡಿ .

Saturday, July 22, 2017

"ಅವಳು ಚೆಲುವೆ" ಯ ಸಂತೋಷದ ಸುದ್ದಿ


ಏನು  ಅಂದರೆ "ಅವಳು ಚೆಲುವೆ" ಕಥಾ ಸಂಕಲನ  ಕರ್ನಾಟಕ ಪುಸ್ತಕ ಗ್ರಂಥಾಲಯಕ್ಕೆ  ಆಯ್ಕೆ ಆಗಿದೆ. 
ಈ  ಚೆಲುವೆ  ಈಗ  ಪ್ರಥಮ  ಸುತ್ತಿನಲ್ಲಿ  ಬೆಂಗಳೂರು  ನಾಲ್ಕು ಜೋನ್ ಗೆ ಕಪಾಟು (ಬೀರು) ನಲ್ಲಿ  ಅಲಂಕರಿಸಿ, ನಂತರ ಓದುಗರ  ಆಸಕ್ತಿಗೆ  ನೆರವಾಗುತ್ತಾಳೆ. ನಂತರ  ಹಂತ ಹಂತವಾಗಿ  ಕರ್ನಾಟಕದ  ವಿವಿಧ ಜಿಲ್ಲೆಗಳ ಗ್ರಂಥಾಲಯಕ್ಕೆ ಚೆಲುವೆ ಕಥಾ ಸಂಕಲನ  ಕಪಾಟು  ಅಲಂಕರಿಸುತ್ತಾಳೆ . ಈ ಸಂತೋಷದ  ನಿಮ್ಮಲ್ಲಿ (ನನ್ನ ಓದುಗ ಗೆಳೆಯರಲ್ಲಿ) ಹಂಚಿ ಕೊಳ್ಳಬೇಕೆನಿಸಿತು.  ನಮಸ್ತೆ .

Saturday, July 15, 2017

ಬಸ್ಸು ಅಥವಾ ರೈಲು ಆಟ

ಈ ಆಟ   ನಮ್ಮ  ಕಾಲದಲ್ಲಿ   ಆಡ್ತಾ  ಇದ್ದೀವಿ.  ಇದಕ್ಕೆ  ಬಸ್ಸು  ಅಥವಾ ರೈಲು  ಆಟ  ಅಂತ  ಇದ್ದೀವಿ. ಈ  ಆಟ ಆಡ್ತಾ  ಸುಮಾರು 3-4 ಕಿ ಮೀ   ಓಡಾಡುತಾ ಇದ್ದೀವಿ.  ನಮ್ಮ  ಪಟ್ಟಣ ಮತ್ತು ನಗರಗಳಲ್ಲಿ  ಎಲ್ಲೂ ನನಗೆ ಇದುವರೆಗೆ  ಕಾಣಾಲಿಲ್ಲಾ . ನಮ್ಮ  ಹಳ್ಳಿಗಳಲ್ಲಿ  ಈ ದಿನಕ್ಕೂ ...  ಈ ಕ್ಷಣಕ್ಕೂ ...  ಮಕ್ಕಳು  ಕೇಕೆ  ಹಾಕಿ ಕೊಂಡು  ಆಟವಾಡುತ್ತಾ  ಇರುತ್ತಾರೆ.  ಆಟ  ಆದ ನಂತರ  ತುಂಬು  ಸಂತೋಷದಿಂದ   ಹೊಟ್ಟೆ  ತುಂಬಾ  ಉಂಡು ಮತ್ತು  ಕಣ್ಣು ತುಂಬಾ  ನಿದ್ದೆ ಮಾಡುತ್ತಾರೆ.  ಇದು  ನನ್ನ ಸ್ವಂತ ಮತ್ತು ಗೆಳೆಯರ ಅನುಭವ.  
ನಿಮಗೆ ????????