Thursday, August 31, 2017

ಸೀತಾಪಾದ

ಲೇಪಾಕ್ಷಿ  ಅಂದರೆ  " ಎದ್ದುಳು  ಪಕ್ಷಿ " ಎಂದು  ಅರ್ಥ. ಈ ಪಾದ  ಶ್ರೀ ರಾಮ ಚಂದ್ರ ಪಕ್ಷಿಗೆ   ನುಡಿದ ಮಾತು. ರಾವಣ ಸಂಗಡ ಹೋರಾಟದಲ್ಲಿ  ಸೋತ " ಜಟಾಯು " ಪಕ್ಷಿಯನ್ನು ಸಂತ್ಯೆಸಲು  ರಭಸವಾಗಿ ಸೀತಾಮಾತೆ  ಹೆಜ್ಜೆಯೂರಿದಾಗ  ಈ ಸ್ಟಳ " ಸೀತಾಪಾದ " ಇಷ್ಟು  ದೊಡ್ಡ  ಪಾದನಾ ... !!  ಅಂತ ಗ್ಯೆಡ್ ಗೆ  ಕೇಳಿದಾಗ   "  ಸರ್  ರಾಮಾಯಣ ಕಾಲದಲ್ಲಿ ಸೀತಾಮಾತೆ  24 ಅಡಿ ಮತ್ತು ಶ್ರೀರಾಮ ಚಂದ್ರ  36 ಅಡಿ ಎತ್ತರ. ರಾಕ್ಷಸ ರಾವಣ  104 ಅಡಿ " ಅಂದ . ನನಗೆ ಏಕ ಕಾಲಕ್ಕೆ  ವಿಸ್ಮಯ  ಮತ್ತು  ಆಶ್ಚರ್ಯ.  ನಾನು   ಓದಿದ ಪ್ರಕಾರ  ಐದು  ಸಾವಿರ ವರ್ಷದ ಹಿಂದೆ ಮನುಜನ ಆಯುಸ್ಸು  175 ವರ್ಷ.  ಕಾಲ ಸರಿಯುತ್ತಾ ..... ಈಗ  50  ವರ್ಷಕ್ಕೆ  ನಿಂತಿದೆ. ಈ ರೀತಿಯ ಎತ್ತರ ಸಹ  36 ರಿಂದ  7--8  ಅಡಿ ಗೆ  ನಿಂತಿರ ಬಹುದೆ ...???!!!.  ಚಿತ್ರ ವಿಚಿತ್ರ  ಪ್ರಶ್ನೆ  ಈ ಕ್ಷಣ ಸಹ  ಕಾಡುತ್ತಿದೆ . ಈ ದೇವಾಲಯ  ಏಕ ಶಿಲಾ  ಬಂಡೆ ಮೇಲೆ ಕೆತ್ತಿರುವು ವಿಶೇಷ . 

Saturday, August 26, 2017

ಭತ್ತದ ಕೃಷಿ




ನಮ್ಮ ಗೌರಿಬಿದನೂರು  ತಾಲೂಕಿನ  ಡಿ ಪಾಳ್ಯ ಪಕ್ಕದಲ್ಲಿರುವ ವೆಂಕಟಾಪುರ ಹಳ್ಳಿಯಲ್ಲಿ ಭತ್ತದ ಗದ್ದೆಯ ಕೃಷಿ ಚಟುವಟಿಕೆಯ  ಕೆಲವು  ದೃಶ್ಯ . 

Monday, August 21, 2017

Thursday, August 17, 2017

ನಾಚಿಕೆ=ಸಂಕೋಚ



ಈ ಛಾಯಾಚಿತ್ರ  ಕಲ್ಬುರ್ಗಿಯ  ಒಂದು  ಹಳ್ಳಿಯಲ್ಲಿ ಚಿತ್ರಿಸಿದ್ದು ಸ್ನಾನ  ಮಾಡುತ್ತಿದ್ದ ಬಾಲಕ ಕ್ಯಾಮರಾ ನೋಡಿ .. ತಕ್ಷಣ  ಓಡಿ  ಹೋಗಿ  ಮರೆಯಲಿ ನಿಂತು  ಇಣುಕಿ   ನೋಡಿದ  ...ನನಗೆ   ಈ ದೃಶ್ಯ ತುಂಬಾ ಮನ ಸೆಳೆಯಿತು. 

Tuesday, August 8, 2017

ಕಲುಬುರ್ಗಿ = ಗುಲ್ಬರ್ಗ





     ಕಲಬುರ್ಗಿ ಕನ್ನಡದಲ್ಲಿ(ಕಲ್ಲಿನ ಕೋಟೆ) --  ಉರ್ದು  ಗುಲ್ಬರ್ಗ(ಹೂ ತೋಟ ) . ಇತಿಹಾಸದಲ್ಲಿ  "ರಾಷ್ಟ್ರಕೂಟರು ಚಾಲುಕ್ಯರು "   ನಂತರ  ಮೊಘಲು  ದೊರೆಗಳು   ಈ ಪ್ರದೇಶ  ಆಳಿದ್ದಾರೆ. ಅದ್ಭುತವಾದ  ಕೋಟೆ .  ಕೋಟೆ ಒಳಗೆ ಪ್ಯಾಲೇಸ್ ,ಫಿರಂಗಿ ,ಶಾಶನಗಳು.... ಇವೆ.  ಆದ್ರೆ ಕೋಟೆ  ಭಾಗಶ: ಬಿದ್ದು ಹೋಗಿದೆ. ಕೋಟೆ ಒಳಗೆ  ಮನೆಗಳು  ಆಕ್ರಮಿಸಿಕೊಂಡಿದೆ.  ನೋಡುವುದಕ್ಕೆ ಸುಂದರ ಮತ್ತು ಅದ್ಭುತ ಪ್ರದೇಶ .  ಒಮ್ಮೆ ನೋಡಿದರೆ ನಮ್ಮ ಪೂರ್ವಿಕರು ನೆನಪಾಗುತ್ತಾರೆ .