Saturday, April 25, 2015

ದಾರಿ

ಜೀವನ   ಹೀಗೆ   ತಾನೇ ..........  ರೈಲ್ವೆ  ಕಂಬಿಗಳಂತೆ   ನೇರ  ಇರೋಲ್ಲಾ .

ಕುಟಾನಿ


  ಕುಟಾಣಿ ,  ನನ್ನ ಉಹೇ ...  ಪ್ರಕಾರ  ಈಗಿನ ಪೀಳಿಗೆಗೆ  ಈ ಪದ ಮತ್ತು ಈ ವಸ್ತು  ತಿಳಿದಿರೋಲ್ಲಾ  ಅಂತ ನನ್ನ ಭಾವನೆ . ಇರ್ಲಿ ...  ಸುಮಾರು ೪೦ ವರ್ಷದ ಹಿಂದೆ  ಈ ಕುಟಾಣಿ ಯನ್ನು  ವಯಸ್ಸಾದ  ಹಿರಿಯರು ಎಲೆ ಅಡಿಕೆ ಕುಟ್ಟಿ ಮೆದು ಮಾಡಿ  ತಮ್ಮ ಬೊಚ್ಚು  ಬಾಯಿಗೆ ಹಾಕಿ ಕೊಂಡು  ಮೆಲ್ಲುತ್ತಿದ್ದರು .  ಆಗ  ನಾವುಸಣ್ಣವರಿದ್ದಾಗ   ಈ ಕುಟಾನಿಗೆ   ಚಕ್ಕಲಿ ,ಕೋಡುಬಳೆ ,ತಂಬಿಟ್ಟು .... ಇಂತಹ  ಗಡುಸು  ತಿನಸನ್ನು  ಆಟಕ್ಕೆ ಜಜ್ಜಿ  ಪುಡಿ ಮಾಡಿ  ಗೆಳೆಯರಲ್ಲಾ  ಒಟ್ಟಾಗಿ   ತಿನ್ನುತ್ತಿದ್ದೆವು .  ಆದರೆ    ಆಬಾಲ್ಯ ,   ಆ ಕುಟಾಣಿ ,   ಆ ಬಟಾಣಿ......   ಸವಿ ಸವಿ ನೆನಪು .  ಅಂದ   ಹಾಗೆ  ಈ ಛಾಯಾಚಿತ್ರ  ಮೊನ್ನೆ  ವಿದುರಶ್ವತ್ತ  ಜಾತ್ರೆ ಯಲ್ಲಿ ಚಿತ್ರಿಸಿದ್ದು

Monday, April 13, 2015

ಜೀವ ಜಲ


ಕುಡಿಯುವ  ನೀರಿಗೆ  ನಮ್ಮ  ಗೌರಿಬಿದನೂರು  ಬಯಲುಸೀಮೆ ಯಲ್ಲಿ  ಎಷ್ಟು  ಕಷ್ಟ  ಅಂದ್ರೆ  ಆ ದೇವರು(ಜನಪ್ರತಿನಿಧಿ) ಗೆ ಪ್ರೀತಿ . ಮಕ್ಕಳು ಪರೀಕ್ಷೆ ಸಮಯ ಅನ್ನದೆ ....... ೩/೪ ಕಿ ಮಿ ನೆಡೆದು  ನೀರು  ತರಬೇಕು. ನೀರು  ತರಬೇಕಾದರೆ ತಲೆಸುತ್ತಿ ಬಿದ್ದ ಮಕ್ಕಳೆಷ್ಟು.........  ಆದರೂ   ವಿಧಿ  ಇಲ್ಲಾ  ತರಲೇ  ಬೇಕು. ಈಗ  ಬೇಸಿಗೆ  ಪ್ರಾರಂಭ  ನೀರಿನ  ಸೆಲೆ ... ನಮಗೆ ಚಿನ್ನದ ರೇಖೆ ಗಿಂತ  ಹಿರಿದು .