Friday, August 22, 2014

ಏರಿಯ ಸೊಗಸು


 ನಮ್ಮ ಗೊಟಕನಪುರಹಳ್ಳಿ  ಕೆರೆ ಏರಿಯ    ಮುಂಜಾನೆಯ  ರಮ್ಯ ನೋಟ

Saturday, August 16, 2014

ತೆನೆ ದೇವತೆ

ಮಟ ಮಟ  ಮಧ್ಯಹ್ನ ಉರಿ ಬಿಸಿಲಲಿ ಕುಳಿತು ಜೋಳದ ತೆನೆ ಬಿಡಿಸುತ್ತಿರುವ ಹಳ್ಳಿಯ ತಾಯಿ

Saturday, August 9, 2014

ರಾಷ್ಟ್ರ ಪಕ್ಷಿ


  ಗೌರಿಬಿದನೂರು ಇಂದ ಡಿ ಪಾಳ್ಯ ದ ಕೆರೆ ಹತ್ತಿರ ಇರುವುದು. ಬಲಗಡೆ ರಸ್ತೆಯಲ್ಲಿ   .... ೩ ಕಿ ಮಿ  ಸಾಗಿದರೆಗೊಲ್ಲರ ಹಟ್ಟಿ  ಸಿಗುತ್ತದೆ .  ಅಲ್ಲಿ ಒಂದು ಮನೆ ಎಡೆಗಡೆ....  ಅಲ್ಲಿ  ಕೋಳಿ ಪಿಳ್ಳೆ ಜೊತೆ ಕಡಿಮೆ  ಅಂದ್ರೆ೫-೬ ನವಿಲು ಕಾಳು  ತಿನ್ನತ್ತಾ ಇರುತ್ತೆ.  ಅಲ್ಲಿ  ಕಣ್ಣು ತುಂಬ ನೋಡಿ.  ಅಲ್ಲೇ ಕೆರೆ ಬಳಿ  ನಡೆದರೆ  ನಯನ ಮನೋಹರವಾದ  ನವಿಲಿನ ಗುಂಪು  ನೋಡಬಹುದು . ಖಂಡಿತ ಕಣ್ಣಿಗೆ ಹಬ್ಬ. ಇದೇ ರೀತಿ  ಗೆದೆರೆ ಬೆಟ್ಟ, ಮಾಕಳಿ ಬೆಟ್ಟ.....  ಸುಮಾರು ಕಡೆ ನವಿಲಿನ ಸಂತತಿ ಇದೆ .  ಸರ್ಕಾರ ಮನಸ್ಸು ಮಾಡಿದರೆ  " ವನಮಾಡಬಹುದು. 
   ಈ ಛಾಯಾಚಿತ್ರ  " ಕನ್ನಡಪ್ರಭ " ದ ೧೫/೯/೨೦೧೪ ರಲ್ಲಿ  ಬೆಳಕು ಕಂಡಿದೆ .

Monday, August 4, 2014

ರತ್ನ ಗಿರಿ ಬೆಟ್ಟ 1





   ಮೊನ್ನೆ  ಬಂದ್ ಇತ್ತು .  ನಮ್ಮ ಹುಡುಗರಿಗೆ  ಬಂದ್  ಅಂದ್ರೆ ಹಬ್ಬ.....  ಯಾಕೆಂದರೆ ಟ್ರಿಪ್ ಹಾಕೋಕೆ.
"ರತ್ನಗಿರಿ" ಬೆಟ್ಟಕ್ಕೆ  ಹೋಗುವುದು ತೀರ್ಮಾನ ಆಯಿತು .  ಗೌರಿಬಿದನೂರು - ಮದುಗಿರಿ-ಹೊಸಕೆರೆ- ರತ್ನಗಿರಿ (ಪಾವಗಡ)ರಸ್ತೆ .... ೫೫  ಕಿ ಮಿ . ರತ್ನಗಿರಿ ಬೆಟ್ಟ ನೋಡುವುದುಕ್ಕೆ , ಹತ್ತುವುದಕ್ಕೆ ಮಜಾ ನೆ ಬೇರೆ. ಬೆಟ್ಟದ ವಿಶೇಷ ಅಂದ್ರೆ ಮೂರು  ಬೆಟ್ಟಕ್ಕೆ ಸೇರಿ ಕೋಟೆ ಕಟ್ಟಿದ್ದಾರೆ. ಬೆಟ್ಟ ಏರುತ್ತ ಪ್ರಕೃತಿ ನಿರ್ಮಿಸಿದ  ವಿವಿಧ  ಆಕೃತಿಯ  ಶಿಲೆಗಳು  ಮನಸೆಳೆಯುತ್ತದೆ ಮಧ್ಯದ ಬೆಟ್ಟದ ನೆತ್ತಿಯಲ್ಲಿ  ಶೀತಲವಾದ  ಮಹಾ ವಿಷ್ಣು ದೇವಾಲಯ ವಿದೆ . ಆ ನಂತರ  ತುಸು ಮೇಲೇರಿದರೆ ಬೃಹತ್ ಆಕಾರದ ಕಾವಲು  ಗೋಪುರ. ಬಲಗಡೆ -ಎಡಗಡೆ ತುಸು ಚಿಕ್ಕದಾದ ವಿಶಾಲವಾದ ಬೆಟ್ಟ .  ಈ ಬೆಟ್ಟದಲ್ಲಿರುವ ಕಲ್ಲಿನ   ಪ್ರವೇಶ ದ್ವಾರ , ಮಂಟಪ ,ಕವಲು ಗೋಪುರ , ನೀರಿನ ದೊನ್ನೆ , ಕಣಜ ..... ಒಂದುಂದು ಅದ್ಬುತ . ಇವೆಲ್ಲಾ   ಮೇಲೇರಿ  ಸವಿಬೇಕೆಂದ್ರೆ ನಿಮ್ಮ ತೊಡೆಯಲ್ಲಿ ತುಸು ಕಸವು ಮತ್ತು ಮನದಲ್ಲಿ ಆಸಕ್ತಿ ಇದ್ದರೆ  ಸಾಕು .   ಇಷ್ಟ ಪಟ್ಟು ಕಷ್ಟ ದಿಂದ  ಬೆಟ್ಟ ಹತ್ತಿ ಬೆಟ್ಟದ ತುದಿಯಲ್ಲಿ  ಬೀಸುವ ಗಾಳಿಗೆ ಮೈ ಒಡ್ಡಿದರೆ  ಸ್ವರ್ಗಕ್ಕೆ  ಒಂದೇ ... ಅಡಿ ಅಷ್ಟೇ . ಬೇಕಾದರೆ ನೀವು ಅನುಭವಿಸಿ ಗೆಳೆಯರೆ.

ರತ್ನ ಗಿರಿ ಬೆಟ್ಟ 2




   ಮೊನ್ನೆ  ಬಂದ್ ಇತ್ತು .  ನಮ್ಮ ಹುಡುಗರಿಗೆ  ಬಂದ್  ಅಂದ್ರೆ ಹಬ್ಬ.....  ಯಾಕೆಂದರೆ ಟ್ರಿಪ್ ಹಾಕೋಕೆ.
"ರತ್ನಗಿರಿ" ಬೆಟ್ಟಕ್ಕೆ  ಹೋಗುವುದು ತೀರ್ಮಾನ ಆಯಿತು .  ಗೌರಿಬಿದನೂರು - ಮದುಗಿರಿ-ಹೊಸಕೆರೆ- ರತ್ನಗಿರಿ (ಪಾವಗಡ)ರಸ್ತೆ .... ೫೫  ಕಿ ಮಿ . ರತ್ನಗಿರಿ ಬೆಟ್ಟ ನೋಡುವುದುಕ್ಕೆ , ಹತ್ತುವುದಕ್ಕೆ ಮಜಾ ನೆ ಬೇರೆ. ಬೆಟ್ಟದ ವಿಶೇಷ ಅಂದ್ರೆ ಮೂರು  ಬೆಟ್ಟಕ್ಕೆ ಸೇರಿ ಕೋಟೆ ಕಟ್ಟಿದ್ದಾರೆ.  ಮಧ್ಯದ ಬೆಟ್ಟದ ನೆತ್ತಿಯಲ್ಲಿ  ಶೀತಲವಾದ  ಮಹಾ ವಿಷ್ಣು ದೇವಾಲಯ ವಿದೆ . ಆ ನಂತರ  ತುಸು ಮೇಲೇರಿದರೆ ಬೃಹತ್ ಆಕಾರದ ಕಾವಲು  ಗೋಪುರ. ಬಲಗಡೆ - ಎಡಗಡೆ ತುಸು ಚಿಕ್ಕದಾದ ವಿಶಾಲವಾದ ಬೆಟ್ಟ .  ಈ ಬೆಟ್ಟದಲ್ಲಿರುವ ಕಲ್ಲಿನ   ಪ್ರವೇಶ ದ್ವಾರ , ಮಂಟಪ ,ಕವಲು ಗೋಪುರ , ನೀರಿನ ದೊನ್ನೆ , ಕಣಜ ..... ಒಂದುಂದು ಅದ್ಬುತ . ಇವೆಲ್ಲಾ   ಮೇಲೇರಿ  ಸವಿಬೇಕೆಂದ್ರೆ ನಿಮ್ಮ ತೊಡೆಯಲ್ಲಿ ತುಸು ಕಸವು ಮತ್ತು ಮನದಲ್ಲಿ ಆಸಕ್ತಿ ಇದ್ದರೆ  ಸಾಕು .   ಇಷ್ಟ ಪಟ್ಟು ಕಷ್ಟ ದಿಂದ  ಬೆಟ್ಟ ಹತ್ತಿ ಬೆಟ್ಟದ ತುದಿಯಲ್ಲಿ  ಬೀಸುವ ಗಾಳಿಗೆ ಮೈ ಒಡ್ಡಿದರೆ  ಸ್ವರ್ಗಕ್ಕೆ  ಒಂದೇ ... ಅಡಿ ಅಷ್ಟೇ . ಬೇಕಾದರೆ ನೀವು ಅನುಭವಿಸಿ ಗೆಳೆಯರೆ.