ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Thursday, March 21, 2013
Wednesday, March 20, 2013
Sunday, March 10, 2013
ಹಳೇ ಜಮಾನ
ಗರಡಿ ಮನೆ.
ಗರಡಿ ಮನೆ. ಈ ಪದ ಮತ್ತು ಗರಡಿ ಮನೆ ಸಹ ಮರೆಯಗ್ತಾ ಇದೆ. ೨೫ ವರ್ಷದ ಹಿಂದೆ ಗರಡಿ ಮನೆ ಅಂದ್ರೆ ನಮೆಗೆಲ್ಲ ಗೌರವ ಹಾಗು ಭಕ್ತಿ. ಅಲ್ಲಿ ಆಖಂಡ ಆಸಕ್ತಿ ಮತ್ತು ಸತತ ಏಕಗ್ರತೆ ಇದ್ರೆ ಮಾತ್ರ ಅಲ್ಲಿಗೆ ಪ್ರವೇಶ.ಗರಡಿ ಮನೆ ಪ್ರವೇಶಕ್ಕೆ ಮುನ್ನ " ಹನುಮನ ಲಂಗೋಟಿ "ಹೊಲಿಸಿಕೊಂಡು ಒಳಕ್ಕೆ ಹೆಜ್ಜೆ ಇಡಬೇಕು . ಆ ಲಂಗೋಟಿ ಕಟ್ಟುವುದು, ಅಂಗ ಸಾಧನೆ ಮತ್ತು ಕುಸ್ತಿ ಕಲಿಸುವ ಗುರುಗಳು ನಮಗೆ ದೇವರ ಸಮನ. ನಂತರ ಹಿರಿಯರು. ಅಂಗ ಸಾಧನೆಗೆ ಮುಂಜಾನೆ ೪ ಗಂಟೆಗೆ ಎದ್ದು ದಂಡ,ಬಸಿಕೆ, ಡಂಲ್ ಕರಲ,ಭಾರ ಎತ್ತುವುದು ................... ಹೀಗೆ ತರಹೇವಾರಿ ಕಸರತ್ತು ಮಾಡುವುದು . ಸುಮಾರು ತಿಂಗಳು ಅಥವಾ ವರ್ಷದ ಕಳೆದ ಮೇಲೆ ಮೈ ಗಟ್ಟಿ ಗೊಂಡು ಗುಂಡಿಗೆ ಗಟ್ಟಿಯಾಗಿದ್ದರೆ ಮಾತ್ರ ಕುಸ್ತಿಗೆ ಇಳುಸುತ್ತಾರೆ . ಕುಸ್ತಿ ಮಾಡಲು ಕೆಂಪಾದ ಮಣ್ಣು. ಇದಕ್ಕೆ ಗರಡಿ ಭಾಷೆಯಲ್ಲಿ ಗೋಧ. ಎನ್ನುತ್ತಾರೆ. ಇಂತಹ ಗರಡಿ ಮನೆ ಗೌರಿಬಿದನೂರು ಆಚಾರ್ಯ ಹೈ ಸ್ಕೂಲ್ ನ ಮೈದಾನ ಅಂಚಿನಲ್ಲಿ ವಿವೇಕಾನಂದ ವ್ಯಾಯಾಮ ಶಾಲೆ ಹೆಸರು ನಿಂದ ಪ್ರಸಿದ್ದಿ ಹೊಂದಿತ್ತು . ಇಲ್ಲಿ ಭಾರ ಎತ್ತುವ ಮತ್ತು ಕುಸ್ತಿ ಪಟುಗಳು ಸುಮಾರು ಹೆಸರು ಮಾಡಿದ್ದರು .ಇಂತಹ ಗರಡಿ ಮನೆಗೆ ನಾನು 1985 ರಲ್ಲಿ ಸೇರಿದೆ.ಅಲ್ಲಿ ಕಲಿತು ನಾನು ಕಾಲೇಜ್ ನಲ್ಲಿ 5 ವರ್ಷ ಭಾರ ಎತ್ತುವ ಸ್ಪರ್ಧೆ ಯಲ್ಲಿ ನಾನೇ ಮೊದಲಿಗನಾಗಿ ಪ್ರಶಸ್ತಿ ಪಡೆದೆ ಮತ್ತುಕುಸ್ತಿಸ್ಪರ್ಧೆಗೆ ರಾಜ್ಯ ಮಟ್ಟಕ್ಕೆಆಯ್ಕೆಯಾಗಿ ಕ್ರೀಡಾ ಪಂದ್ಯದಲ್ಲಿ ಗೆದ್ದೆ. ಆದ್ರೆ ನಮ್ಮ ಜಮಾನ ಗರಡಿ ಒರಟು ಈಗಿನಂತೆ 4 ಮತ್ತು 6ಪ್ಯಾಕ್ ಇರಲಿಲ್ಲಾ. ಯಾಕೋ ಹಿಂದಿನದು ನೆನಪು ಮಾಡಿಕೊಳ್ಳಬೇಕೆನಿಸಿತು.......
Wednesday, March 6, 2013
ಕತ್ತೆ
ಇತ್ತೀಚೆಗೆ ಕತ್ತೆಯ ಬಳಕೆ ಕಡಿಮೆ ಆಗಿದೆ. ಆದರೆ ಕತ್ತೆಗೆ ಸಾಕಷ್ಟು ಬೆಲೆ ಇದೆ.
ಕತ್ತೆಯ ಹಾಲು ಲೀಟರ್ ಗೆ ಇನ್ನೂರು ರೂ ಮಾರುತ್ತಾರೆ . ಈ ಹಾಲು ರೋಗ ವಾಸಿ ಆಗುವುದಕ್ಕೆ ಬಳಸುತ್ತಾರೆ. ಈಗಲೂ ಕಾಶ್ಮೀರ ಕಣಿವೆಗಳಲ್ಲಿ ಮದ್ದು ಗುಂಡು ಸಾಗಿಸುವುದಕ್ಕೆ ನಮ್ಮ ಸೇನಾಪಡೆ ಹೆಚ್ಚಾಗಿ ಬಳಸುವುದು ಈ ಕತ್ತೆಗಳನ್ನೇ . ಈಗ ಮಾರುಕಟ್ಟೆಯಲ್ಲಿ ಕತ್ತೆಯ ಬೆಲೆ ಸುಮಾರು ಹತ್ತರಿಂದ ಇಪ್ಪತ್ತು ಸಾವಿರ.
ಕತ್ತೆಯ ಹಾಲು ಲೀಟರ್ ಗೆ ಇನ್ನೂರು ರೂ ಮಾರುತ್ತಾರೆ . ಈ ಹಾಲು ರೋಗ ವಾಸಿ ಆಗುವುದಕ್ಕೆ ಬಳಸುತ್ತಾರೆ. ಈಗಲೂ ಕಾಶ್ಮೀರ ಕಣಿವೆಗಳಲ್ಲಿ ಮದ್ದು ಗುಂಡು ಸಾಗಿಸುವುದಕ್ಕೆ ನಮ್ಮ ಸೇನಾಪಡೆ ಹೆಚ್ಚಾಗಿ ಬಳಸುವುದು ಈ ಕತ್ತೆಗಳನ್ನೇ . ಈಗ ಮಾರುಕಟ್ಟೆಯಲ್ಲಿ ಕತ್ತೆಯ ಬೆಲೆ ಸುಮಾರು ಹತ್ತರಿಂದ ಇಪ್ಪತ್ತು ಸಾವಿರ.
Saturday, March 2, 2013
ಚಾಕೃತಿ
ಕಲೆಗಳಲ್ಲಿ ಹಲವು . ಆದರೆ ಸೂಕ್ಷ್ಮ ಕಲೆ ಕೆಲವು. ಅಂಥಹ ಚಾಕೃತಿ ಕಲೆಯನ್ನು ಹತ್ತು ವರ್ಷದಿಂದ ಏಕಲವ್ಯನಂತೆ ಸ್ವಯಂ ಕಲಿಕೆ ಇಂದ ಶ್ರದ್ಧೆ ಇಂದ ಸಾಧಿಸಿದ ನಮ್ಮ ಹೆಮ್ಮೆಯ ಗೌರಿದನೂರು ತಾಲುಕಿನ ಮುದುಗೆರೆಯ ಗ್ರಾಮದ ನನ್ನ ಗೆಳೆಯ ಎಂ ಜೆ ಸಚ್ಚಿನ್ ಸಂಘೆ . ಚಾಕೃತಿ ಕಲೆ ಅಂದ್ರೆ ಸಾಮಾನ್ಯ ಸೀಮೆಸುಣ್ಣ ದಲ್ಲಿ ಸೂಜಿ ಸಹಾಯದಿಂದ ಚಿತ್ರ ಕಲೆ ಯನ್ನು ಬಿಡಿಸಿವುದು . ಇದುವುರವೆಗೆ ಸುಮಾರು ೬೦ ಕಲಾಕೃತಿ ಬಿಡಿಸಿದ್ದಾರೆ. ಇವರ ಕಲೆ ಹಲವು ಕಡೆ ಯಶಸ್ವಿ ಯಾಗಿ ಪ್ರದರ್ಶನ ವಾಗಿದೆ. ಅವರ ಹೆಚ್ಚಿನ ಕಲಾಕೃತಿ
ನೋಡಲು ಇಲ್ಲಿ www.facebook.
Subscribe to:
Posts (Atom)