Sunday, October 20, 2013

ಅವಸಾನ


  ಉರುಳಿ ಬಿದ್ದಿದೆ  
  ವಿದುರ ನೆಟ್ಟ ಮರ 
  ಶತ  ಶತಮಾನದ ಕೊಳಕು ಹುಳುಕುಗಳ.. ಕಂಡು
  ಸ್ಥಿತಪ್ರಜ್ಞನತೆ ಯಲಿ
 
ಮೆರದ ಆ-ಮರ     
            ಮರ  ಮುರಿದು ಬಿದ್ದಿದೆ     
            ಟೊಂಗೆ  ಟಿಸಿಲು ನುಚ್ಚು ನೂರಾಗಿದೆ     
           ಮತ್ತೆ ಭುವಿ ಯಿಂದ
           ಎದ್ದು ಗೆದ್ದು ಬರುವ ಹಂಬಲ     
           ಭ್ರಷ್ಟ ಗೆದ್ದಲು  ಹುಳುವಿನಿಂದಲ್ಲಾ ..... ಬೆಂಬಲ

No comments:

Post a Comment