Saturday, February 23, 2013

೪ನೇ ಸಮ್ಮೇಳನ



   ಗೌರಿಬಿದನೂರ್  ೪ನೇ ಕನ್ನಡ ಸಾಹಿತ್ಯ ಸಮ್ಮೇಳನ  ಪ್ರಸಿದ್ದ ಪುಣ್ಯ ಸ್ಥಳ   ವಿದುರಾಶ್ವತ್ಥ ದಲ್ಲಿ  ನೆಡೆಯಿತು .
ಸಮ್ಮೇಳನ ಅಧ್ಯಕ್ಷರು ಡಿ .
ಎಸ್ . ಹನುಮಂತರಾಯ  ವಹಿಸಿದ್ದರು. ಕಾರ್ಯ ಕ್ರಮದಲ್ಲಿ  ನಾನು   ಭಾಗವಹಿಸಿದ್ದೆ. ಕವಿಗೋಷ್ಠಿಯಲ್ಲಿ  ನಾನು ಮಕ್ಕಳ ಕವನ  ''ಉಪ್ಪಿಟ್ಟು '' ವಾಚಿಸಿದೆ.
 

ಉಪ್ಪಿಟ್ಟು  ಉಪ್ಪಿಟ್ಟು
ಕಾಂಕ್ರಿಟ್ ಕಾಂಕ್ರಿಟ್

      ಗೋಧಿ  ಕಾಳಿನ  ಉಪ್ಪಿಟ್ಟು
      ಅಕ್ಕಿ ನುಚ್ಚಿನ ಉಪ್ಪಿಟ್ಟು
      ರಾಗಿ ರವೆಯ ಉಪ್ಪಿಟ್ಟು
      ಜೋಳ  ತರಿಯ ಉಪ್ಪಿಟ್ಟು

ಉಪ್ಪಿಟ್ಟು ಉಪ್ಪಿಟ್ಟು
ಕಾಂಕ್ರಿಟ್  ಕಾಂಕ್ರಿಟ್

    ರವೆಯನು ಹುರಿದು
    ಮಸಾಲೆ ತರಿದು
    ಕೊಬ್ಬರಿ ತುರಿದು
    ಒಗ್ಗರಣೆ ಸುರಿದು

ಉಪ್ಪಿಟ್ಟು ಉಪ್ಪಿಟ್ಟು
ಕಾಂಕ್ರಿಟ್ ಕಾಂಕ್ರಿಟ್

    ಬಡವರ ಹಸಿವುಗೆ ಒಬ್ಬಟ್ಟು
    ಆರೋಗ್ಯಕೆ ಉತ್ತಮ ಪೇಟೆಂಟ್
    ಮದುಮೇಹಿಗೆ ಪರ್ಮೆನೆಂಟ್
     ಡಾ.ಹೆಚ್.ನರಸಿಂಹಯ್ಯರವರ ರೂಂ ಮೆಟ್


ಉಪ್ಪಿಟ್ಟು ಉಪ್ಪಿಟ್ಟು
ಕಾಂಕ್ರಿಟ್  ಕಾಂಕ್ರಿಟ್

No comments:

Post a Comment