ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Friday, February 27, 2015
Tuesday, February 24, 2015
Monday, February 16, 2015
Wednesday, February 11, 2015
ಬಾಹುಬಲಿ
ಬಾಹುಬಲಿ ಅಂದ್ರೆ .. ಮಾನವನ ಶರೀರ ರಚನೆಯಲ್ಲಿ ಅಗತ್ಯ ಕ್ಕಿಂತ ಉದ್ದವಾಗಿರುವಬಲಿಷ್ಠ
ವಾಗಿರುವ ತೋಳುಗಳು ಇದ್ದರೆ ಅವರಿಗೆ ಬಾಹುಬಲಿ ಎನ್ನುತ್ತಾರೆ . ಇತಿಹಾಸದಲ್ಲಿ ಈ
ಕಂಡು ಬರುವ ವ್ಯಕ್ತಿ ಗಳು ಅಂದ್ರೆ ಪ್ರಥಮವಾಗಿ ಮಹಾಭಾರತದ ಭೀಮಸೇನ ನಂತರ ಸ್ಥಾನ
ಬಾಹುಬಲಿ ಮಹಾನುಭಾವನಿಗೆ. ಮಹಾವೀರ ಅಂದರೆ .... ಶತ್ರು ನ ಗೆದ್ದರೆ ವೀರ
ಎನ್ನುತ್ತಾರೆ . ತನ್ನ ಮನಸ್ಸನ್ನಗೆದ್ದರೆ ಮಹಾವೀರ ಎನ್ನುತ್ತಾರೆ . ಈಮಹಾನುಭಾವನ ನೋಡಲು ಮತ್ತು ಸಾಹಿತ್ಯ ಸಮ್ಮೇಳನ ನೋಡಲುನಾನು ನನ್ನ ಗೆಳಯ ನನ್ನ victor GLX ಬ್ಯೆಕ್ ಲ್ಲಿ ಹೋಗಿದ್ದಿವಿ . ಒಂದು ಅದ್ಬುತ ಅನುಭವ.
Thursday, February 5, 2015
Friday, January 30, 2015
Thursday, January 22, 2015
ಗುಡಿಸಲು
ಗುಡಿಸಲು ಮುಕ್ತ ಗ್ರಾಮ .... ಅಂತ ಹೇಳುತ್ತೆ ಸರಕಾರ ಇದಕ್ಕೆ ಆಪವಾದ ಅನ್ನುವಂತೆ ಅವುಲಾ ಬೆಟ್ಟ ದಿಂದ ಗುಡಿಬಂಡೆ ಸಾಗುವ ಮಂಡಿಕಲ್ಲು ಮಾರ್ಗದಲ್ಲಿ ಕರೆ ಕದಿರೆನ ಹಳ್ಳಿ ಯಲ್ಲಿ ಹಳ್ಳಿಯಲ್ಲಾ .... ಭಾಗಶ; ಎಲ್ಲಾ ಗುಡಿಸಿಲಿನ ಮನೆಗಳೇ ಆದರೆ ದವಸ ದಾನ್ಯ ಕಾಳು ಕಡ್ಡಿ ಸಾಕು ಪ್ರಾಣಿ ....
ಎಲ್ಲಾ ಸಮೃದ್ದಿ ಇಂದ ನಳನಳಿಸಿ ಮನಸ್ಸನ್ನು ಖುಷಿ ಪಡಿಸುತ್ತೆ . ಕಣ್ಣು
ಹಾಯಸಿದಷ್ಟು ....ದಿಗಂತದ ಅಂಚಿನವರೆಗೆ ಹಸುರಿನ ಹೊದಿಕೆ . ತುಂಬಿ ತುಳುಕುವ ಕೆರೆ,
ಕುಂಟೆ,ಬದು ,ಬಾವಿ ,ಗದ್ದೆ .,..... ನೀರಿನಿಂದ ತೊನೆದಾಡುತ್ತೆ . ನಮ್ಮ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆ ಯಾ ಈ ಹಳ್ಳಿ ಈ ರೀತಿ ಇರವುದು ವಿಶೇಷ .
Tuesday, January 20, 2015
Friday, January 9, 2015
Saturday, November 29, 2014
Friday, November 7, 2014
ಗೊದ್ದ
ಈ ಮಳೆಕಾಲದಲ್ಲಿ ಜೀವ ಸೃಷ್ಟಿಯ ವ್ಯೆಚಿತ್ರಗಳು ಅನೇಕೆನೆಕ .... ಅದರಲ್ಲಿ ಗೊದ್ದ ಜೀವ ಸೃಷ್ಟಿಯು ಒಂದು . ಇವು ತಮ್ಮ ಬೇಟೆಗಾಗಿ ೧-೨ ಕಿ. ಮಿ ಸಾಗುತ್ತದೆ . ವಿಚಿತ್ರ ಅಂದ್ರೆ ಪಕ್ಕದಲ್ಲಿರುವ ೪-೬ ಹೆಜ್ಜೆಗೆ ಒಂದುಕಿ ಮಿ ಸುತ್ತು ಹೊಡೆದಿರುತ್ತದೆ . ಇವು ಶಿಸ್ತಿನ ಸಿಪಾಯಿ ಯಂತೆ ಸಾಗುವಾಗ ಬೇಟೆಯ ದಿಕ್ಕನ್ನು ತಿಳಿಸುತ್ತಾ ಸಾಗುತ್ತವೆ . ಈ ಗೊದ್ದದ ಗೋಡು ನೋಡಲು ವಿಶಿಷ್ಟವಾಗಿ ಅಂದವಾಗಿ ಕಾಣುತ್ತದೆ .
Monday, November 3, 2014
Friday, October 31, 2014
Tuesday, October 21, 2014
Sunday, October 5, 2014
Monday, September 22, 2014
Saturday, September 20, 2014
Wednesday, September 10, 2014
ಬಾಗಿನದ ಮೊರ
ಗೌರಿ-ಗಣೇಶ ಹಬ್ಬ ಸಮೀಪಿಸುತಿದೆ . ಗಂಡು ಮಕ್ಕಳಿಗೆ ಗಣೇಶ ಹಬ್ಬ ವಿಶೇಷವಾಗಿ ಆಚರಿಸಿದರೆ , ಹೆಂಗೆಳೆಯರು ವಿಶಿಷ್ಟವಾಗಿ ಪುರಾತನ ಸಂಪ್ರಾಯದಂತೆ ಆಚರಿಸುತ್ತಾರೆ . ಈ ಗೌರಿ ಹಬ್ಬದ ಆಚರಣೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವುದು "ಮೊರ". ಬಿದಿರಿನ ಮೊರ . ಈ ಹೊಸ ಮೊರದಲ್ಲಿ ಸುಮಂಗಲಿಯ "ಮಂಗಳದ್ರವ್ಯ "ವಿಟ್ಟು ತಾಯಿ ಗೌರಿ ಮಾತೆಗೆ "ಬಾಗಿನ"ಅರ್ಪಿಸಿ , ತಾವು ಶ್ರದ್ಧೆಯಿಂದ ಬಾಗಿನ ಪಡೆಯುತ್ತಾರೆ . ಈ ಸಂಪ್ರಾದಾಯ ಹೆಚ್ಚಾಗಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದೆ . ನಂತರ ಈ ಮೊರಕ್ಕೆ "ಮೆಂತ್ಯ" ಲೇಪಿಸುವ ಆಂಧ್ರ ಪ್ರದೇಶದ ಹೆಂಗೆಳೆಯರು ಗುಂಪು ಗುಂಪಾಗಿ ಬರುತ್ತಾರೆ . "ಮೆಂತ್ಯ" ಅಂದ್ರೆ ಮೆಂತ್ಯ ಕಾಳು , ಹರಿಶಿನ ಮತ್ತು ಕಾಗದಕ್ಕೆ ನೀರನ್ನು ಬೆರೆಸಿ ಚನ್ನಾಗಿ ಕುದಿಸಿ ಗಂಜಿ(ಪೇಸ್ಟ್) ತಯಾರಿಸಿ ಮೊರಗಳಿಗೆ ಮಂದವಾಗಿ ಸವರುತ್ತಾರೆ . ಒಣಗಿದ ಈ ಮೊರ ಅಡಿಗೆ ಮನೆ ಬಳಕೆಗೆ ಬರುತ್ತದೆ . ಅಂದರೆ ದವಸ ಧಾನ್ಯದಲ್ಲಿರುವ ಕಡ್ಡಿ ಕಸ ಕಲ್ಲು ಬೆರ್ಪಡಿಸುವುದಕ್ಕೆ ಬಳಕೆಯಾಗುತ್ತದೆ . ಈ ಪ್ಲಾಸ್ಟಿಕ್ ಯುಗದಲ್ಲಿ ಮೊರ ತನ್ನ ವಿಶಿಷ್ಟ ಸ್ಥಾನ ಪಡೆದಿರುವುದು ಸುಳ್ಳಲ್ಲಾ .
Subscribe to:
Posts (Atom)


















































