1970 ಇಂದ 1990 ರ ತನಕ ಗೌರಿಬಿದನೂರು ನ್ಯಾಷನಲ್ ಕಾಲೇಜು ನಲ್ಲಿ ವರ್ಷದ ಸಾಂಸ್ಕೃತಿಕ ಕಾರ್ಯ ಕ್ರಮ ಗಳಲ್ಲಿ ಕಡಿಮೆ ಅಂದ್ರೆ ಒಂದು ತಿಂಗಳು " ನಾಟಕ " ದ ಸ್ಪರ್ಧೆ ನೆಡೆಯುತ್ತಿತ್ತು . ಆ ಜಮಾನದಲ್ಲಿ ನಮ್ಮ ಕಾಲೇಜ್ ನಿಂದ ಹಿರಿಯರಾದ ರವಿ ಸರ್,ಮುನಿಸಿಪಲ್ ಕಾಲೇಜಿನ ಎ. ಎಸ್.ಅರ್, ಎ . ಸುರೇಶ, ಜಿ.ಬಾಲಾಜಿ ,ವಕೀಲರಾದ ಶ್ಯಾಮಣ್ಣ, ಪ್ರತಾಪ್ ರೆಡ್ಡಿ.... ಇವರೆಲ್ಲಾ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗೆ ಭಾಗವಹಿಸಿ ಕರ್ನಾಟಕ ದಲ್ಲಿ ಗೌರಿಬಿದನೂರು ನ ಕೀರ್ತಿ ಪತಾಕೆ ಹಾರಿಸಿದ್ದರು . ಈ ಹಿರಿಯರ ನಂತರ ನಾವು ಬಂದೆವು .
ನಾವು ವರ್ಷ ವರ್ಷ ಸಹ ನಾಟಕ ಗಳಲ್ಲಿ ಭಾಗವಹಿಸಿದೆವು. ೧. " ಕಾಲೇಜ್ ಎಲೆಕ್ಶನ್" ೨. "ಗುರ್ತಿನವರು " ೩.ಪಿತಾಮಹ ರಾದ ಶ್ರೀ ಮಾಸ್ಟರ್ ಹಿರಣಯ್ಯ ರಚಿಸಿದ "ಅಳಿಯವತಾರ " ಈ ನಾಟಕ ಕಾಲೇಜ್ ಸ್ಪರ್ಧೆ ಯಲ್ಲಿ ಮೊದಲ ಬಹುಮಾನ ಲಭಿಸಿತು . ಆ ಬಹುಮಾನ ಮುಖ್ಯ ಮಂತ್ರಿಗಳ ಶ್ರೀ ಅರ್. ಗುಂಡೂರಾಯರು ನಮ್ಮ ತಂಡಕ್ಕೆ ಕೊಟ್ಟರು . ಈ ಮದುರ ಕ್ಶಣ ಗಳನ್ನಾ ನಿಮ್ಮ ಬಳಿ ಹಂಚಿ ಕೊಳ್ಳಬೇಕೆನಿಸಿತು
i know the old guy in that frame his name is girish from madhugere
ReplyDelete