ನಮ್ಮ ತಾಲೂಕು ನಿಂದ ಬೆಂಗಳೊರು ರಸ್ತೆಗೆ ೫ ಕಿ.ಮಿ ರಸ್ತೆಗೆ ದಾಟಿದರೆ .....ಬಲಕ್ಕೆ ಕಾಣುವ ಬೆಟ್ಟಗಳ ಸಾಲುಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ.ಆ ಬೆಟ್ಟ ಏರಿದಾಗ ಈ ಸುಂದರ ಮನ ಮೋಹಕ ದೃಶ್ಯ ಕಾಣುತ್ತದೆ. ಈ ರಸ್ತೆ ಯಲ್ಲಿ ಓಡಾಡಿದಾಗ ನನ್ನ ಮಗ ಈ ಬೆಟ್ಟ ಹತ್ತಬೇಕೆಂಬ ಒಂದೇ ಹಠ... ಸರಿ ಯಂದು ಶಿವರಾತ್ರಿ ಹಬ್ಬದ ದಿನ ಮುಂಜಾನೆ ೫.೪೫ ಕ್ಕೆ ಬೆಟ್ಟದ ಬುಡದಲ್ಲಿ ಇದ್ದೆವು.ತುಸು ಬೆಳಕು ಹರಿದಾಗ ಹತ್ತುವುದಕ್ಕೆ ಶುರು ಮಾಡಿದಾಗ ಅದರ ಮಜ ವೇ ಖುಷಿ ಕೊಡುವಂತದ್ದು.ಇದು ಎರಡನೇ ಬಾರಿ ಈ ಹತ್ತುತ್ತಿರುವುದು.
ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Sunday, March 25, 2012
ಪಕ್ಷಿ ನೋಟ
ಈ ಮಾಕಳಿ ಬೆಟ್ಟದ ತಪ್ಪಲು ಏರಿ ನಿಂತು ಸೂರ್ಯ ಉದಯ ನೋಡುತ್ತಿದ್ದಾಗ
ಕ್ಷಣ ಕ್ಷಣ ಕ್ಕೂ ಇಳೆ ತನ್ನ ರಂಗು ಬದಲಾಯಿಸುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರು ಕೆಲವು ಕೋನಗಳಿಂದ ಛಾಯಾಚಿತ್ರ ಗಳನ್ನೂ ತೆಗೆಯುವುದಕ್ಕೆ ಆಗಲಿಲ್ಲ. ಮತ್ತು ಅತಿ ಸೂಕ್ಷ್ಮ ರಂಗುಗಳು ಛಾಯಾಚಿತ್ರದಲ್ಲಿ ಮೊಡಿಬರುತ್ತಿಲ್ಲಾ. ಆದರೆ ಪ್ರಸಿದ್ದ ಚಿತ್ರ ಕಲಾವಿದರು ಈ ಸುಂದರ ರಂಗು ರಂಗಿನ ಪ್ರಕೃತಿಯಾ ಚಿತ್ರ ಬಿಡಿಸಿದ್ದಾರೆ.ಆಗ ನೋಡುತ್ತಿಗಾ..........ಇಷ್ಟು ರಂಗು ಸಾಧ್ಯವೇ..? ಎಂದು ನನ್ನ ನಾನೇ ಪ್ರಶ್ನೆ ಹಾಕಿ ಕೊಳ್ಳುತ್ತಿದ್ದೆ. ಈಗ ಅದಕ್ಕೆಲ್ಲ ಸಮರ್ಥ ಉತ್ತರ ದೊರುಕುತ್ತಿದೆ. ಈ ಜನ್ಮ ಸಾರ್ಥಕ ಅನಿಸುತ್ತೆ.
Monday, March 5, 2012
Sunday, March 4, 2012
ಕವಣೆ
ಸೂರ್ಯ ಕಾಂತಿ,ಜೋಳ,ರಾಗಿ...............ಬೆಳೆಗಳು ಸಮೃದ್ದಿಯಾಗಿ ಬೆಳದು ನಳನಲಿದಾಗ ಆದನ್ನು ಕಾಪಾಡುವುದೇ ನೇಗಿಲಯೋಗಿ ಗೆ ದೊಡ್ಡ ಶ್ರಮದಾಯಕ. ಹೇಗೆಂದರೆ ಪಕ್ಷಿಗಳಿಂದ ಕಾಪಾಡುವುದು. ಹಿಂಡು ಹಿಂಡು ಹಕ್ಕಿಗಳು ಬೆಳೆಗಳಿಗೆ ದಾಳಿ ಇಟ್ಟಾಗ .....ಖಾಲಿ ಡಬ್ಬ ಹೊಡೆದು ಶಬ್ದ ಮಾಡಿ ಓಡಿಸುತ್ತಾರೆ. ಕೆಲವು ಬಾರಿ ಈ ಶಬ್ದಕ್ಕೆ ಈ ಹಕ್ಕಿಗಳು ಜಗ್ಗುವುದ್ದಿಲ್ಲ. ಆಗ ಅನಿವಾರ್ಯವಾಗಿ ನೇಗಿಲಯೋಗಿ " ಕವಣೆ " ಬಳಸುತ್ತಾನೆ. ಈ ಕವಣೆ ಎರಡು ಕಡೆ ಕಾರವಾಗಿ ತಿರುಗಿಸುತ್ತಾ ಚಾವುಟಿಯ ಒಂದು ದಾರವನ್ನು ಬಿಟ್ಟಾಗ ಒಳಗಿದ್ದ ಕಲ್ಲು ಹಕ್ಕಿಗಳ ನಡುವೆ ಬೀಳುತ್ತದೆ. ಆಗ ಹಕ್ಕಿ ಹಾರಿ ಹೋಗುತ್ತದೆ. ಈ ರೀತಿ ಒಬ್ಬನೇ ೫-೬ ಎಕರೆ ಹೊಲವನ್ನು ಕಾಯಬಹುದು.
Tuesday, February 28, 2012
Friday, February 24, 2012
ಅಲೆಮನೆ
ಸವಿದರೆ ಬಿಸಿ ಬಿಸಿ ಬೆಲ್ಲ
ನಲ್ಲೆಯ ಗಲ್ಲದಷ್ಟೇ ಸಿಹಿ ಎಲ್ಲಾ .!!!!
ಮೂವತ್ತು ವರ್ಷಗಳ ಹಿಂದೆ ಹಿಂತಿರುಗಿ ನೋಡಿದಾಗ...........
ಗೌರಿಬಿದನೂರ್ ನ ಆಲೆಮನೆ ಯಾ ವ್ಯೆಭವ ಭಾರತ ದಲ್ಲೇ ಪ್ರಸಿದ್ದಿ. ಇಲ್ಲಿನ ನೇಗಿಲ ಯೋಗಿಗಳು
ಕಬ್ಬಿನ ಬೆಳೆಯನ್ನು ಭಾರತದಲ್ಲೇ ಅತಿ ಹೆಚ್ಚಾಗಿ ಬೆಳೆಯುತ್ತಿದ್ದರು ಮತ್ತು ಒಂದು ಎಕರೆಗೆ ಸಾವಯವ ಗೊಬ್ಬರ ಬಳಸಿ ಹೆಚ್ಚು ಇಳವರಿ ತೆಗಯುತ್ತಿದ್ದರು. ಅನೇಕ ಕೃಷಿ ಪ್ರಶಶ್ತಿ ಹೊಡುಕಿಕೊಂಡು ಬರುತ್ತಿತ್ತು.,ಈ ತಾಲೂಕಿನ " ನಾಮಗೊಂಡ್ಲು " ಕಬ್ಬಿನ ಜಲ್ಲೆಯಂತು ಅಮೃತ ದಷ್ಟು ರುಚಿ ಕಾರಣ ಈ ಮಣ್ಣಿನ ಗುಣ ವಿಶೇಷ ವಾದದು. ಈ ಹಳ್ಳಿಯ ಸುತ್ತಾ ಹತ್ತು ಕಿ.ಮಿ. ತಯಾರಿಸಿದ ಬೆಲ್ಲ ವಂತೂ ಇತರೆ ಯಾವ ಬೆಲ್ಲಕ್ಕು ಸರಿಸಾಟಿ ಬರುವುದಿಲ್ಲ.ಅದಕ್ಕೆ ಈ ಸಮಯದಲ್ಲೂ ನಾಮಗೊಂಡ್ಲು ಬೆಲ್ಲ ಅಂದ್ರೆ ಮುಗಿಬಿದ್ದು ಕೊಳ್ಳುತ್ತಾರೆ. ಆಗಾ ತಾಲೂಕಿನಲ್ಲಿ ಸಾವಿರಾರು ಅಲೆಮನೆಗಳು ಈಗ ದುರ್ಬಿನು ಹಾಕಿ ಹುಡುಕಿದರೂ ಕಾಣುವುದು ಕಷ್ಟ. ಈ ಛಾಯಾ ಚಿತ್ರ ನಾಮಗೊಂಡ್ಲು ಪಕ್ಕದ ಹಳ್ಳಿಯ "ಬಾಲರೆಡ್ಡಿ ಹಳ್ಳಿ ".
ಮೊಟ್ಟ ಮೊದಲ ಬಾರಿಗೆ ಕಬ್ಬನ್ನು ಗಾಣಕ್ಕೆ ಇಟ್ಟು..ಕಬ್ಬಿನ ಹಾಲನ್ನು ಬಕೇಟು ಮೂಲಕ ಹೂತ್ತು , ಎರಡನೇ ಛಾಯಾಚಿತ್ರ ದಲ್ಲಿ ತೋರಿಸಿದಂತೆ ದೊಡ್ಡ ಕೊಪ್ಪರಿಕೆಗೆ ಸುರಿದು ಚನ್ನಾಗಿ ಕಾಯಸಿ ಹದಕ್ಕೆ ಬಂದ ಮೇಲೆ , ಕೆಳೆಗಿನ ಕೊಪ್ಪಕರಿಗೆ ಸುರಿದು ........ನಂತರ ಚೌಕಾರದ ಗುಣಿಗೆ ಸುರಿದು (ಮೂರನೆ ಚಿತ್ರ ನೋಡಿ)ಚನ್ನಾಗಿ ಕಲಕಿ .........ನಂತರ ಬಿಸಿ ಆರಿದ ಮೇಲೆ
ಸಣ್ಣ ಉಂಡೆ ಮಾಡಿದರೆ ಅಪ್ಪಟ ಬೆಲ್ಲ ಸಿದ್ದ.
Tuesday, February 21, 2012
Tuesday, January 31, 2012
Thursday, January 26, 2012
Tuesday, January 17, 2012
ಹಚ್ಚೆ
ಹಚ್ಚೆ. ಇದಕ್ಕೆ ಶತ ಶತಮಾನಗಳ ಇತಿಹಾಸವಿದೆ.ಸಂಪ್ರದಾಯವಾಗಿ ಹಚ್ಚೆಗೆ ಗಿಡಮೂಲಿಕೆಗಳನ್ನು ಚೆನ್ನಾಗಿ ಅರೆದು ಅದರಿಂದ ರಸವನ್ನು ಸಂಗ್ರಹಿಸಿ,ತಮಗೆ ಬೇಕಾದ ಚಿತ್ರವನ್ನು ಮುದ್ರಿಸಿ, ನಂತರ ಗಿಡಮೊಲಿಕೆಯ ರಸವನ್ನು ಸೂಜಿ ಇಂದ ನೆನೆಸಿಕೊಂಡು ಚುಚ್ಚುತ್ತ.........ಚಿತ್ರವನ್ನು ಮುಗಿಸುತ್ತಾರೆ.ಈ ರೀತಿ ಚಿತ್ರಿಸಿದ ಹಚ್ಚೆ ಮಾನವನ ಉಸಿರಿನ ತನಕ ಜೊತೆಯಲ್ಲಿ ಇರುತ್ತದೆ. ಈ ಹಚ್ಚೆಯನ್ನು ಸ್ನೇಹ,ಪ್ರೀತಿ,ಪ್ರೇಮ...ನೆನಪಿಗೆ ಚಿತ್ರಿಸಿ ಕೊಳ್ಳುತ್ತಾರೆ. ಈಗ ಅಧುನಿಕ ಕಾಲದ ಹಚ್ಚೆಗಳುಹಾಕಿದ ಸಾಮಾನ್ಯವಾಗಿ ಒಂದು ತಿಂಗಳು ಇರುವುದಿಲ್ಲ ಅನ್ನಿಸುತ್ತೆ. ಈ ಅಧುನಿಕ ಹಚ್ಚೆಗಳಲ್ಲಿ ಆಲಂಕಾರ ಪ್ರಧಾನವಾಗಿ ಎದ್ದು ಕಾಣುತ್ತಿರುತ್ತದೆ. ಮಾನವ ಸಂಭದದ ಭಾವನೆಗಳು ಕಡಿಮೆ.
Thursday, January 12, 2012
ಜಾತ್ರೆಯಲಿ.. ಯಾತ್ರೆ
ಗೌರಿಬಿದನೂರ್ ನಿಂದ ಕೇವಲ ೫ ಕಿ.ಮಿ. ದೂರದಲ್ಲಿರುವ " ಅಲಕಾಪುರ " ಹಳ್ಳಿಯಲ್ಲಿ ಸೋಮುವಾರ ಹುಣ್ಣಿಮೆ ದಿನ ಸೋಮೇಶ್ವರ ಸ್ವಾಮಿ ಯಾ ಜಾತ್ರೆ ನಡೆಯಿತು. ನನ್ನ ಕ್ಯಾಮರ ದೊಂದಿಗೆ ಆ ಜಾತ್ರೆ ಒಳ ಹೊಕ್ಕಾಗ ನನ್ನ ಕಣ್ಣಿಗೆ ಈ ದೃಶ್ಯ ಕಂಡಿತು. ತೇರು, ಸುರುಳಿಯಾಕಾರದ ದಬ್ಬೆ (ರಿಂಗ್) ಯನ್ನು ವಸ್ತು ಮೇಲೆ ಹಾಕುವ ಆಟ,ಗಿಳಿ ಶಾಸ್ತ್ರ,ಪಿಳ್ಳಂಗೋವಿ,ಚಾಲಕಿ ಹೂ ಮಾರುವ ಹುಡುಗ,ಉತ್ಸವ ಮೂರ್ತಿ ತರುವ,ಹುಡುಗರನ್ನು ತುಸು ಹಾಳು ಮಾಡುವ ಅಂಕಿ ಆಟ,ಜಿಲೇಬಿ,ಜಾನಪದ ಕುಣಿತಗಳು,ಮಕ್ಕಳ ಆಟಗಳು.................... ಹೀಗೆ ಹಲವಾರು ಒಂದುಂದು ಛಾಯಾ ಚಿತ್ರದ ಹಿಂದೆ
ಒಂದುಂದು ಕತೆಯೇ ಇದೆ ಎನ್ನಬಹುದು. ನಮ್ಮ ಹಳ್ಳಿಯ ಸಂಸ್ಕೃತಿಯನ್ನು ನೋಡಲು ಇಂತಹ ಜಾತ್ರೆ, ಸಂತೆ,ಕರಗ.....ನೋಡಿದಾಗಲೇ ಅರಿವು ಆಗುವುದು.
ಜಾತ್ರೆಯಲಿ ...ಯಾತ್ರೆ ೨
ಗೌರಿಬಿದನೂರ್ ನಿಂದ ಕೇವಲ ೫ ಕಿ.ಮಿ. ದೂರದಲ್ಲಿರುವ " ಅಲಕಾಪುರ " ಹಳ್ಳಿಯಲ್ಲಿ ಸೋಮುವಾರ ಹುಣ್ಣಿಮೆ ದಿನ ಸೋಮೇಶ್ವರ ಸ್ವಾಮಿ ಯಾ ಜಾತ್ರೆ ನಡೆಯಿತು. ನನ್ನ ಕ್ಯಾಮರ ದೊಂದಿಗೆ ಆ ಜಾತ್ರೆ ಒಳ ಹೊಕ್ಕಾಗ ನನ್ನ ಕಣ್ಣಿಗೆ ಈ ದೃಶ್ಯ ಕಂಡಿತು. ತೇರು, ಸುರುಳಿಯಾಕಾರದ ದಬ್ಬೆ (ರಿಂಗ್) ಯನ್ನು ವಸ್ತು ಮೇಲೆ ಹಾಕುವ ಆಟ,ಗಿಳಿ ಶಾಸ್ತ್ರ,ಪಿಳ್ಳಂಗೋವಿ,ಚಾಲಕಿ ಹೂ ಮಾರುವ ಹುಡುಗ,ಉತ್ಸವ ಮೂರ್ತಿ ತರುವ,ಹುಡುಗರನ್ನು ತುಸು ಹಾಳು ಮಾಡುವ ಅಂಕಿ ಆಟ,ಜಿಲೇಬಿ,ಜಾನಪದ ಕುಣಿತಗಳು,ಮಕ್ಕಳ ಆಟಗಳು.................... ಹೀಗೆ ಹಲವಾರು ಒಂದುಂದು ಛಾಯಾ ಚಿತ್ರದ ಹಿಂದೆ
ಒಂದುಂದು ಕತೆಯೇ ಇದೆ ಎನ್ನಬಹುದು. ನಮ್ಮ ಹಳ್ಳಿಯ ಸಂಸ್ಕೃತಿಯನ್ನು ನೋಡಲು ಇಂತಹ ಜಾತ್ರೆ, ಸಂತೆ,ಕರಗ.....ನೋಡಿದಾಗಲೇ ಅರಿವು ಆಗುವುದು.
Wednesday, January 11, 2012
ಗೌರಿಬಿದನೂರ್ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ
ಸಾಹಿತ್ಯದ ಆಸಕ್ತರು
- ನನ್ನ" ಒಬ್ಬಟ್ಟು" ಮಕ್ಕಳ ಕವನ ಹೇಳುತ್ತಿರುವುದು
ಸಮ್ಮೇಳನ ಛಾಯಾಚಿತ್ರಗಳನ್ನು ಚಿತ್ರಿಸಲು ನೂಕು ನುಗ್ಗಲು
**********************
ಗೌರಿಬಿದನೂರ್ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ೭ ಮತ್ತು ೮ ರಂದು ಅದ್ಬುರಿಯಾಗಿ ನಡೆಯಿತು.ಸಮ್ಮೇಳನ ಅಧ್ಯಕ್ಷರಾಗಿ ಕೆ.ನಾರಾಯಣಸ್ವಾಮಿ ರವರು ನೆಡಿಸಿಕೊಟ್ಟರು. ಸಂಜೆ ಕವಿಗೋಷ್ಠಿ ಬಹಳ ಸುಂದರವಾಗಿ ನಡೆಯಿತು. ಅದರಲ್ಲಿ ನಾನು ಈ ಮಕ್ಕಳ ಕವನ ಓದಿದೆ. ಸಮ್ಮೇಳನ ನೆನಪಿಗಾಗಿ " ಗೌರಿ ಭಾಗಿನ " ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ಒಬ್ಬಟ್ಟು
ಒಬ್ಬಟ್ಟು ಒಬ್ಬಟ್ಟು
ಹಬ್ಬಕೆ ತಟ್ಟಿದ ಒಬ್ಬಟ್ಟು
ಬೆಲ್ಲದ ಸಿಹಿಯ ಒಬ್ಬಟ್ಟು
ಪಾತ್ರೆ ತುಂಬಿತು ಒಬ್ಬಟ್ಟು
ಘಮ ಘಮ ವಾಸನೆ ಹರಡಿತ್ತು
ನೆಂಟರು ಬಂದರು ಸಾಕಷ್ಟು
ಬಂದರು ನೆಂಟರು ಮಳೆಯಸ್ಟು
ಊಟಕೆ ಕುಳಿತರು ಮತ್ತಷ್ಟು
ತಿಂದರು ಎಂಟೆಂಟು ಹತ್ತತ್ತು
ಹೊಟ್ಟೆಗೆ ತುರುಕಿದರು ಇನ್ನಸ್ಟು
ಹಬ್ಬದ ಒಬ್ಬಟ್ಟು ಮುಗಿದೊಯ್ತು
ತಿನ್ನುವ ಆಸೆಯು ಬತ್ತೋಯ್ತು
ಹೊಟ್ಟೆ ತುಂಬಾ ಹಸಿದಿತ್ತು
ಸಿಕೂ ಬಾಕು ಉಳಿದಿತ್ತು
ಬೇಳೆ ಸಾರು ಸುರಿದಾಯ್ತು
ಹೊಟ್ಟೆ ತುಂಬಾ ಕುಡಿದಾಯ್ತು
ಹಬ್ಬದ ಒಬ್ಬಟ್ಟು ಕನಸಾಯ್ತು
Subscribe to:
Posts (Atom)