Tuesday, October 25, 2011

ಗೊರವಯೈ




 ಇವರು  ಸಹ ನಮ್ಮ ಜಾನಪದ ಕೊಂಡಿಗಳು. ನನ್ನ ತಾಲೂಕಿನ  ಗೆದೆರೆ  ಹಾಗು ಗೆದೆರೆ ಬೊಮ್ಮಸಂದ್ರ
ಹಳ್ಳಿಯಲ್ಲಿ  ವಾಸವಾಗಿ ಇಂದಿಗೂ ತಮ್ಮ ಕುಲ  ವೃತ್ತಿಯನ್ನು  ಬಿಟ್ಟಿಲ್ಲಾ.ಇವರು  ವ್ಯಕ್ತಿಯ  ಮುಖ ಚಹರೆ
ನೋಡಿ  ತುಸು ಹೊಗಳಿಕೆ  ಮಾತು  ಹಾಡಿ ಹೊಗಳಿ  ಜಾತಕ ಹೇಳುತ್ತಾರೆ . ಇವರಿಗೂ  ತಮ್ಮದೇ  ಆದಾ
ಪರಂಪರೆ  ಇದೆ.


Monday, October 10, 2011

ಪಾಪಸು ಕಳ್ಳಿ



ಈ  ಪಾಪಸು  ಕಳ್ಳಿ  ನೋಡುವುದಕ್ಕೆ  ಸುಂದರ  ಆದರೆ  ಈ ಮುಳ್ಳು ಚುಚ್ಚಿದರೆ  ಅಷ್ಟೇ
ವಿಷಕಾರಿ. ಆದರೆ  ವಿಸ್ಮಯ  ಅಂದರೆ  ಇದರ  ಹಣ್ಣು. ಬಹಳ  ರುಚಿಕರ.! ಈ ಹಣ್ಣನ್ನು
ಬಹಳ  ಹುಷಾರಿನಿಂದ  ತಿನ್ನಬೇಕು.  ಈ ಹಣ್ಣಿನ ಮೇಲಲ್ಲ ಧೋಳಿನಂತ ಮುಳ್ಳುಗಳು
ಅದರ  ಒಳಗೆ  ರಕ್ತ ವರ್ಣದ  ಹಣ್ಣಿನ ತಿರುಳು. ರುಚಿ  ಸ್ವರ್ಗಕ್ಕೆ  ಒಂದು ಗೇಣು. ತಪ್ಪಿದರೆ
ಬಾಯೆಲ್ಲ  ಧೋಳು ನ   ಮುಳ್ಳು. ಹೊಸಬರು  ಇದನ್ನು  ತಿನ್ನದಿರುವುದು  ಲೇಸು.

Friday, October 7, 2011

ಬಲಿ


            ಹಳ್ಳಿಗಳಲ್ಲಿ  ದಸರಾ, ದೀಪಾವಳಿ,ಯುಗಾದಿ..... ಹಬ್ಬಗಳಲ್ಲಿ ದುಷ್ಟ  ಶಕ್ತಿ ಗಳು  ಹಳ್ಳಿ ಪ್ರವೇಶ  ಮಾಡ ಕುಡುದೆಂದು ಈ ರೀತಿ  ಕೋಳಿಯನ್ನು  ಹಳ್ಳಿಯ ಮುಖ್ಯ  ದಾರಿಯಲ್ಲಿ  ಬಲಿ ಕೊಟ್ಟಿರುವುದು.      
            ಇದರಿಂದ   ಹಳ್ಳಿಯಲ್ಲಿ   ನೆಮ್ಮದಿ ಇಂದ  ಇರುತ್ತದೆ ಎಂದು ಅವರ  ನಂಬಿಕೆ.

Sunday, September 11, 2011

ತಾಯಿಯ ಮಮತೆ


ದಾಸಯ್ಯ



ನಮ್ಮ ಪ್ರಾಚೀನ ಜನಪದ ಕಲೆಗಳಲ್ಲಿ  ಈ ದಾಸಯ್ಯ  ಪಾತ್ರವು ಒಂದು.
ಇವರ  ಕ್ಯೆಲ್ಲಿ  ಇರುವ  ಪಾತ್ರೆ ಯನ್ನು  " ಅಕ್ಷಯಾ " ಪಾತ್ರೆ ಎಂದು
ಇದನ್ನು  ಶ್ರೀ ಕೃಷ್ಣ    ಕರಣಿಸಿದ್ದು.....ಎನ್ನುತ್ತಾರೆ. ಈ  ಪಾತ್ರೆ ಯಲ್ಲಿ
ನೀರನ್ನು ತುಂಬಿ  ತಲೆ ಮೇಲೆ  ಹಾಕಿಸಿ ಕೊಂಡರೆ    ಶುಭ  ಎನುತ್ತಾರೆ.
ಜೀವ ನದಿ,ಕಲ್ಯಾಣಿ... ಗಳ ಹತ್ತಿರ ಈ   ಸನ್ನಿವೇಶ ಇರುತ್ತದೆ. ಈ ಜಾಗಟೆ
ದುಷ್ಟ  ಶಕ್ತಿ  ಗಳನ್ನೂ ಓಡಿಸಲು.

Sunday, July 31, 2011

ಮಿಥುನ ಶಿಲ್ಪಗಳು

ಹಾವೂಗಳ  ಮಿಲನದಂತೆ

ಪ್ರಾಣಿಗಳ  ಮಿಲನದಂತೆ

ಮನುಜನ  ಮಿಲನದಂತೆ


ಈ ಛಾಯಾ ಚಿತ್ರದಲ್ಲಿ ಕಾಣುತ್ತಿರುವ ಶಿಲಾ ಕೃತಿಗಳು ಪ್ರಕ್ರತಿಯಲ್ಲಿ ನಿರ್ಮಾಣವಾಗಿರುವುದು. ಈ ಚಿತ್ರ 
ಗಳನ್ನು ಸೂಕ್ಷ್ಮವಾಗಿ  ಗಮನಿಸಿದಾಗ  ವಿವಿಧ ರೀತಿಯ  ರತಿ ಚಿತ್ರದಂತೆ  ಕಾಣುತ್ತದೆ. ಈ ಶಿಲಾ ಕೃತಿಗಳು ಗೌರಿಬಿದನೂರ್ ಸಕ್ಕರೆ ಫ್ಯಾಕ್ಟರಿ ಯಾ   ಹಿಂಭಾಗದಲ್ಲಿ  ಕಾಣುವ  ಶಿಲಾ ಚಿಕ್ಕ ಬೆಟ್ಟದಲ್ಲಿ ಇವೆ.


ಶಿಲೆಯಲಿ ನೀರಿನ ಬರಹ



ಹಳ್ಳಿ ನೋಟ




ಗಣಪತಿ


Monday, July 4, 2011

ಚಿತ್ರ ಕವನ


ಬೋಳು  ಬೆಂಡಾದ  ಮರ
ಮರು ಚಿಗುರಲ್ಲಾ
ಮೋಡ  ಕವಿದ  ಸೂರ್ಯನ ರಶ್ಮಿ
ಭೂಮಿ  ತಲುಪಲ್ಲಾ
       ಆದರೆ
ಕಳಚಿ ಬಿದ್ದ ಹೋದ ಸಂಭಂದ
ಚಿಗುರುಸುವುದು  ಬೆಳೆಸುವುದು
ನಮ್ಮ  ಮನದಲಿದೆ

Tuesday, June 28, 2011

ಕಲಾ ಕೃತಿ ಬೆಟ್ಟ

      
ಹಸುವಿನ  ಮುಖದಂತೆ ಕಾಣುವ

ರತಿ ಆಟದಲಿ ಕಾಣುವ ಸರ್ಪದಂತೆ

ಮೆಟ್ಟಿಲುಗಳು 

ಬ್ಯಾಗ್ ನಂತೆ 

ಗೌರಿಬಿದನೂರ್ ನಿಂದ  ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಬರುವ " ಪುರ " ಎಂಬ ಹಳ್ಳಿಯಲ್ಲಿ ಎಡ ಭಾಗಕ್ಕೆ  ಕಾಣುವ ಸುಂದರ  ಪುಟ್ಟ ಬೆಟ್ಟದಲ್ಲಿ  ಪ್ರಕೃತಿ ನಿರ್ಮಿತ ಕಲಾಕೃತಿಯೇ ಅಡಗಿದೆ.

Thursday, June 23, 2011

ನಂಟು


ಸಾಕು ಪ್ರಾಣಿಗಳಿಗೆ  ಹೇನು ,ಹುಳು .........ಬಿದ್ದಾಗ  ಈ ಹಕ್ಕಿಗಳು ಹೆಕ್ಕಿ ಹೆಕ್ಕಿ ತೆಗೆದು ಪ್ರಾಣಿಗಳನ್ನು ಸ್ವಚ್ಛ ಗೊಳಿಸಿ ತಾನು ಹೊಟ್ಟೆ ತುಂಬಿಸಿ ಕೊಳ್ಳುತ್ತೇವೆ.

Thursday, June 9, 2011

ಓತಿಕ್ಯಾತ


ಭಾನುವಾರ  ನನ್ನ ಮಕ್ಕಳನ್ನಾ  ಕಲ್ಲಿನ್ತ್ರ್ಯನ  ಗುಡ್ಡ ಕ್ಕೆ  ಕರೆದುಕೊಂಡು 
ಹೋಗಿದ್ದೆ. ಆಗ  ಈ ಬಣ್ಣ  ಬಣ್ಣದ  ಓತಿಕ್ಯಾತ  ಕಣ್ಣಿಗೆ  ಬಿತ್ತು. ನಮ್ಮನ್ನು ಕಂಡ 
ತಕ್ಷಣ  ನಾಗಾಲೋಟದಿಂದ ಓಡಿತು..... ಆದರೆ  ನಾ ಬಿಡಬೇಕಲ್ಲ. ವಿಶೇಷ    
ಅಂದರೆ  ಗಾಬರಿಗೆ  ಮೂಟಾಗಿದ್ದ  ಬಾಲ  ನಂತರ  ಬಹು ಉದ್ದವಾಗಿ  ಹೊರ   
ಬಂತು. ಇದನ್ನು  ಕಂಡ  ನನ್ನ ಮಕ್ಕಳ ಮೊಗದಲಿ  " ಆನೊಂದು ಭ್ರಹ್ಮ .      

Sunday, May 29, 2011

ಬಸವನ ಹುಳು






            ನೆರಳಲಿ  ತಂಪಾಗಿ  ಚಿಪ್ಪಿನೊಳಗೆ ಮುದುಡಿ ಮಲಗಿದ್ದ  ಬಸವನ ಹುಳುವನ್ನ,
        ಎಬ್ಬಿಸಿ  ಬಿಸಿಲಲ್ಲಿ ಇಟ್ಟಾಗ  ಅದರ  ನಡಿಗೆಯ ಭಂಗಿಗಳು..............!!!!!!!.

Monday, May 23, 2011

ಹೊಟ್ಟೆ ಪಾಡು

ಕೆರೆಯಲ್ಲಿ ನೀರು ಕಡಿಮೆ  ಆಗುತ್ತಾ  ಬರುತ್ತಿದೆ. ಈ ಹಕ್ಕಿಗಳಿಗೆ  ಮೀನು ಗಳ  ಸುಗ್ಗಿ.




Saturday, May 14, 2011

ಸಿಂಗಾರ



      ಈ  ಹಕ್ಕಿಗಳು    ಮುಂಜಾನೆಯ  ಸೂರ್ಯನಿಗೆ ಮಧು  ಮಗನಂತೆ  ಸಿಂಗಾರ 
     ಮಾಡುವದರಲ್ಲಿ  ಸಂಬ್ರಮದಿಂದ  ತೊಡಗಿಸಿ ಕೊಂಡಿವೆ.