ಶ್ರೀ ರಂಗನಾಥ ಬೆಟ್ಟ. ಇದು ಗೌರಿಬಿದನೂರ್ ಗ್ರಾಮದ ಚಿಲೇನಹಳ್ಳಿಯಾ ಬುಡದಲ್ಲಿ ಇದೆ.
ನೆಲಮಟ್ಟದಿಂದ ಸುಮಾರು ಸಾವಿರ ಆಡಿ ಎತ್ತರ ಇರಬಹುದು. ಬೆಟ್ಟದ ನೆತ್ತಿಯಲ್ಲಿ ರಂಗಂಥ ಸ್ವಾಮಿ ಯ ಪುರಾತನ ವಿಗ್ರಹ ಇದೆ. ನನಗೆ ಆಶ್ಚರ್ಯ ಅಂದ್ರೆ ಪ್ರತಿಯೊಂದು ಬೆಟ್ಟಕ್ಕೆ ತನ್ನದೇ ಆದ ಹೆಜ್ಜೆ,ಸೊಗಸು,ಸೊಬಗು,ಸೊಗಡು ......ತುಂಬಿ ಕೊಂಡಿರುತ್ತದೆ. ಈ ಬೆಟ್ಟದ ವಿಶೇಷ ಇದೆ ಅಗಿದೆ. ಬೆಟ್ಟ ನೆತ್ತಿಯಲ್ಲಿ ಹಕ್ಕಿಯ ಕಣ್ಣಾಡಿಸಿದರೆ ಈ ಪರಿಸರ ಸ್ವರ್ಗ ದಂತೆ ಕಾಣುತ್ತದೆ. ಮಾರ್ಗ ಮಂಚೇನ ಹಳ್ಳಿ ---ಹಳೇಹಳ್ಳಿ,ಚಿಲೇನಹಳ್ಳಿಅಂತರ ಗೌರಿಬಿದನೂರ್ ನಿಂದ ಇಪ್ಪತ್ತು km.
ಗೌರಿಬಿದನೂರ್ ೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಸಿದ್ದ ಪುಣ್ಯ ಸ್ಥಳ ವಿದುರಾಶ್ವತ್ಥ ದಲ್ಲಿ ನೆಡೆಯಿತು .
ಸಮ್ಮೇಳನ ಅಧ್ಯಕ್ಷರು ಡಿ .ಎಸ್ . ಹನುಮಂತರಾಯ ವಹಿಸಿದ್ದರು. ಕಾರ್ಯ ಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಕವಿಗೋಷ್ಠಿಯಲ್ಲಿ ನಾನು ಮಕ್ಕಳ ಕವನ ''ಉಪ್ಪಿಟ್ಟು '' ವಾಚಿಸಿದೆ.
ಉಪ್ಪಿಟ್ಟು ಉಪ್ಪಿಟ್ಟು
ಕಾಂಕ್ರಿಟ್ ಕಾಂಕ್ರಿಟ್
ಗೋಧಿ ಕಾಳಿನ ಉಪ್ಪಿಟ್ಟು
ಅಕ್ಕಿ ನುಚ್ಚಿನ ಉಪ್ಪಿಟ್ಟು
ರಾಗಿ ರವೆಯ ಉಪ್ಪಿಟ್ಟು
ಜೋಳ ತರಿಯ ಉಪ್ಪಿಟ್ಟು
ಉಪ್ಪಿಟ್ಟು ಉಪ್ಪಿಟ್ಟು
ಕಾಂಕ್ರಿಟ್ ಕಾಂಕ್ರಿಟ್
ರವೆಯನು ಹುರಿದು
ಮಸಾಲೆ ತರಿದು
ಕೊಬ್ಬರಿ ತುರಿದು
ಒಗ್ಗರಣೆ ಸುರಿದು
ಉಪ್ಪಿಟ್ಟು ಉಪ್ಪಿಟ್ಟು
ಕಾಂಕ್ರಿಟ್ ಕಾಂಕ್ರಿಟ್
ಬಡವರ ಹಸಿವುಗೆ ಒಬ್ಬಟ್ಟು
ಆರೋಗ್ಯಕೆ ಉತ್ತಮ ಪೇಟೆಂಟ್
ಮದುಮೇಹಿಗೆ ಪರ್ಮೆನೆಂಟ್
ಡಾ.ಹೆಚ್.ನರಸಿಂಹಯ್ಯರವರ ರೂಂ ಮೆಟ್
ಉಪ್ಪಿಟ್ಟು ಉಪ್ಪಿಟ್ಟು
ಕಾಂಕ್ರಿಟ್ ಕಾಂಕ್ರಿಟ್
ಈ ಸ್ವಚ್ಛ ನಗುವಿಗೆ ಬೆಲೆ ಕಟ್ಟಲು .............??????