ನಮ್ಮ ತಾಲೂಕು ನಿಂದ ಬೆಂಗಳೊರು ರಸ್ತೆಗೆ ೫ ಕಿ.ಮಿ ರಸ್ತೆಗೆ ದಾಟಿದರೆ .....ಬಲಕ್ಕೆ ಕಾಣುವ ಬೆಟ್ಟಗಳ ಸಾಲುಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ.ಆ ಬೆಟ್ಟ ಏರಿದಾಗ ಈ ಸುಂದರ ಮನ ಮೋಹಕ ದೃಶ್ಯ ಕಾಣುತ್ತದೆ. ಈ ರಸ್ತೆ ಯಲ್ಲಿ ಓಡಾಡಿದಾಗ ನನ್ನ ಮಗ ಈ ಬೆಟ್ಟ ಹತ್ತಬೇಕೆಂಬ ಒಂದೇ ಹಠ... ಸರಿ ಯಂದು ಶಿವರಾತ್ರಿ ಹಬ್ಬದ ದಿನ ಮುಂಜಾನೆ ೫.೪೫ ಕ್ಕೆ ಬೆಟ್ಟದ ಬುಡದಲ್ಲಿ ಇದ್ದೆವು.ತುಸು ಬೆಳಕು ಹರಿದಾಗ ಹತ್ತುವುದಕ್ಕೆ ಶುರು ಮಾಡಿದಾಗ ಅದರ ಮಜ ವೇ ಖುಷಿ ಕೊಡುವಂತದ್ದು.ಇದು ಎರಡನೇ ಬಾರಿ ಈ ಹತ್ತುತ್ತಿರುವುದು.
ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Sunday, March 25, 2012
ಪಕ್ಷಿ ನೋಟ
ಈ ಮಾಕಳಿ ಬೆಟ್ಟದ ತಪ್ಪಲು ಏರಿ ನಿಂತು ಸೂರ್ಯ ಉದಯ ನೋಡುತ್ತಿದ್ದಾಗ
ಕ್ಷಣ ಕ್ಷಣ ಕ್ಕೂ ಇಳೆ ತನ್ನ ರಂಗು ಬದಲಾಯಿಸುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರು ಕೆಲವು ಕೋನಗಳಿಂದ ಛಾಯಾಚಿತ್ರ ಗಳನ್ನೂ ತೆಗೆಯುವುದಕ್ಕೆ ಆಗಲಿಲ್ಲ. ಮತ್ತು ಅತಿ ಸೂಕ್ಷ್ಮ ರಂಗುಗಳು ಛಾಯಾಚಿತ್ರದಲ್ಲಿ ಮೊಡಿಬರುತ್ತಿಲ್ಲಾ. ಆದರೆ ಪ್ರಸಿದ್ದ ಚಿತ್ರ ಕಲಾವಿದರು ಈ ಸುಂದರ ರಂಗು ರಂಗಿನ ಪ್ರಕೃತಿಯಾ ಚಿತ್ರ ಬಿಡಿಸಿದ್ದಾರೆ.ಆಗ ನೋಡುತ್ತಿಗಾ..........ಇಷ್ಟು ರಂಗು ಸಾಧ್ಯವೇ..? ಎಂದು ನನ್ನ ನಾನೇ ಪ್ರಶ್ನೆ ಹಾಕಿ ಕೊಳ್ಳುತ್ತಿದ್ದೆ. ಈಗ ಅದಕ್ಕೆಲ್ಲ ಸಮರ್ಥ ಉತ್ತರ ದೊರುಕುತ್ತಿದೆ. ಈ ಜನ್ಮ ಸಾರ್ಥಕ ಅನಿಸುತ್ತೆ.
Monday, March 5, 2012
Sunday, March 4, 2012
ಕವಣೆ
ಸೂರ್ಯ ಕಾಂತಿ,ಜೋಳ,ರಾಗಿ...............ಬೆಳೆಗಳು ಸಮೃದ್ದಿಯಾಗಿ ಬೆಳದು ನಳನಲಿದಾಗ ಆದನ್ನು ಕಾಪಾಡುವುದೇ ನೇಗಿಲಯೋಗಿ ಗೆ ದೊಡ್ಡ ಶ್ರಮದಾಯಕ. ಹೇಗೆಂದರೆ ಪಕ್ಷಿಗಳಿಂದ ಕಾಪಾಡುವುದು. ಹಿಂಡು ಹಿಂಡು ಹಕ್ಕಿಗಳು ಬೆಳೆಗಳಿಗೆ ದಾಳಿ ಇಟ್ಟಾಗ .....ಖಾಲಿ ಡಬ್ಬ ಹೊಡೆದು ಶಬ್ದ ಮಾಡಿ ಓಡಿಸುತ್ತಾರೆ. ಕೆಲವು ಬಾರಿ ಈ ಶಬ್ದಕ್ಕೆ ಈ ಹಕ್ಕಿಗಳು ಜಗ್ಗುವುದ್ದಿಲ್ಲ. ಆಗ ಅನಿವಾರ್ಯವಾಗಿ ನೇಗಿಲಯೋಗಿ " ಕವಣೆ " ಬಳಸುತ್ತಾನೆ. ಈ ಕವಣೆ ಎರಡು ಕಡೆ ಕಾರವಾಗಿ ತಿರುಗಿಸುತ್ತಾ ಚಾವುಟಿಯ ಒಂದು ದಾರವನ್ನು ಬಿಟ್ಟಾಗ ಒಳಗಿದ್ದ ಕಲ್ಲು ಹಕ್ಕಿಗಳ ನಡುವೆ ಬೀಳುತ್ತದೆ. ಆಗ ಹಕ್ಕಿ ಹಾರಿ ಹೋಗುತ್ತದೆ. ಈ ರೀತಿ ಒಬ್ಬನೇ ೫-೬ ಎಕರೆ ಹೊಲವನ್ನು ಕಾಯಬಹುದು.
Subscribe to:
Posts (Atom)